ನವದೆಹಲಿ, ಡಿ 01 (DaijiworldNews/DB): ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರ ಚುನಾವಣಾ ಪ್ರಚಾರ ರ್ಯಾಲಿ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕರು ಸೇರಿದಂತೆ 20 ಮಂದಿ ನಾಯಕರ ಮೊಬೈಲ್ ಫೋನ್ಗಳಿಗೆ ಕಳ್ಳರು ಕನ್ನ ಹಾಕಿದ್ದಾರೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಎಎಪಿ ಭರ್ಜರಿ ಚುನಾವಣಾ ಪ್ರಚಾರ ಕಾರ್ಯ ನಡೆಸುತ್ತಿದೆ. ಉತ್ತರ ದೆಹಲಿಯ ಮಲ್ಕಾ ಗಂಜ್ ಎಂಬಲ್ಲಿ ಬುಧವಾರ ನಡೆದ ರೋಡ್ ಶೋ ವೇಳೆ ಮೊಬೈಲ್ ಫೋನ್ಗಳು ಕಳವಾಗಿವೆ.
ನಾಯಕರ ಮೊಬೈಲ್ ಫೋನ್ಗಳು ಕಳವಾಗಿರುವ ಬಗ್ಗೆ ಎಎಪಿ ಶಾಸಕ ಅಖಿಲೇಶ್ ತ್ರಿಪಾಠಿ, ಆಪ್ ನಾಯಕ ಗುಡ್ಡಿದೇವಿ, ಶಾಸಕ ಸೋಮನಾಥ್ ಭಾರ್ತಿ ಅವರ ಕಾರ್ಯದರ್ಶಿಗಳು ಪೊಲೀಸರಿಗೆ ದೂರು ನೀಡಿದ್ದು, ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಉತ್ತರ ಡಿಸಿಪಿ ಸಾಗರ್ ಕಲ್ಸಿ ಹೇಳಿದ್ದಾರೆ.
ದೆಹಲಿ ಮಹಾನಗರ ಪಾಲಿಕೆಯ 250 ವಾರ್ಡ್ಗಳಿಗೆ ಡಿಸೆಂಬರ್ 4ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 7ರಂದು ಮತ ಎಣಿಕೆ ಬಳಿಕ ಫಲಿತಾಂಶ ಪ್ರಕಟವಾಗಲಿದೆ.