ತೆಲಂಗಾಣ, ಡಿ 01 (DaijiworldNews/HR): ದೆಹಲಿ ಸರ್ಕಾರದ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲ(ಇಡಿ)ಯು ತಮ್ಮ ಹೆಸರು ಸೇರಿಸಿರುವುದಕ್ಕೆ ಟಿಆರ್ಎಸ್ ಶಾಸಕಿ, ಕೆಸಿಆರ್ ಪುತ್ರಿ ಕವಿತಾ ರೆಡ್ಡಿ ಮೋದಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಮುಂದಿನ ವರ್ಷ ತೆಲಂಗಾಣದಲ್ಲಿ ಚುನಾವಣೆ ನಡೆಯಲಿದ್ದು ಮೋದಿಗಿಂತ ಮೊದಲು ಇಡಿ ರಾಜ್ಯಕ್ಕೆ ಆಗಮಿಸಿದೆ. ಪ್ರಕರಣದಲ್ಲಿ ಜೈಲಿಗೆ ಕಳುಹಿಸಿದರೂ ಭಯಪಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಚುನಾವಣೆ ಇರುವ ರಾಜ್ಯದಲ್ಲಿ ಮೋದಿಗಿಂತ ಮೊದಲು ಇಡಿ, ಸಿಬಿಐ ಸೇರಿದಂತೆ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳ ದಾಳಿ ಸಾಮಾನ್ಯವಾಗಿದೆ ಎಂದರು.
ಇನ್ನು ತೆಲಂಗಾಣದಲ್ಲಿ ಇಡಿ, ಸಿಬಿಐ ತಂತ್ರ ಕೆಲಸ ಮಾಡುವುದಿಲ್ಲ. ಬೇಕಿದ್ದರೆ ನನ್ನನ್ನು ಜೈಲಿಗೆ ಕಳುಹಿಸಲಿ. ಯಾರೂ ಭಯಪಡುವುದಿಲ್ಲ ಎಂದು ಹೇಳಿದ್ದಾರೆ.