ಧಾರವಾಡ, ಡಿ 01 (DaijiworldNews/HR): ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಿಂದ ಶಬರಿಮಲೆಗೆ ಪಾದಯಾತ್ರೆಗೆ ಹೊರಟ ಮೂವರು ಭಕ್ತರ ಜೊತೆ ಒಂದು ಶ್ವಾನ ಕೂಡಾ ನಡೆದಾಡಿರುವ ಘಟನೆ ವರದಿಯಾಗಿದೆ.
ಧಾರವಾಡದಿಂದ ಹೊರಟ ಮಂಜು ಕಮ್ಮಾರ, ರವಿ ಹಾಗೂ ನಾಗನಗೌಡ ಅವರಿಗೆ ಶ್ವಾನ ಧಾರವಾಡ ಬೈಪಾಸ್ ರಸ್ತೆಯಲ್ಲಿ ಸಿಕ್ಕಿದೆ. ಈ ಮೂವರು ಊಟಕ್ಕೆ ಕುಳಿತಾಗ ಶ್ವಾನಕ್ಕೂ ಆಹಾರ ಹಾಕಿದ್ದಾರೆ. ನಂತರ ಇವರು ಅಲ್ಲಿಂದ ಪಾದಯಾತ್ರೆ ಮುಂದುವರಿಸಿದಾಗ ಅವರ ಹಿಂದೆಯೇ ಶ್ವಾನ ಹೆಜ್ಜೆ ಹಾಕಿದೆ.
ಇನ್ನು ಶ್ವಾನವನ್ನು ವಾಪಸ್ ಒಡಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದು ನಾಯಿ ಇವರ ಜೊತೆ ಹೆಜ್ಜೆ ಹಾಕುವುದನ್ನು ಮಾತ್ರ ಬಿಡಲಿಲ್ಲ. ಹೀಗಾಗಿ ಶ್ವಾನವನ್ನು ಶಬರಿಮಲೆಯವರೆಗೆ ಕರೆದುಕೊಂಡು ಹೋಗುವ ನಿರ್ಧಾರ ಮಾಡಿದ್ದಾರೆ.