ಬೆಳಗಾವಿ, ನ 30 (DaijiworldNews/MS) : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೆಡಿಎಸ್ ಪಕ್ಷಕ್ಕೆ ಜೆಡಿಎಸ್ ಸೇರ್ಪಡೆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸುಳಿವು ಕೊಟ್ಟಿದ್ದಾರೆ.
ಂಆಧ್ಯಮದೊಂದಿಗೆ ಬೆಳಗಾವಿಯಲ್ಲಿ ಮಾತನಾಡಿ ಅವರು, " ರಮೇಶ ಜಾರಕಿಹೊಳಿ ಜೆಡಿಎಸೇರ್ಪಡೆ ಆಗುತ್ತಾರೆ ಎಂದು ನಾವು ಹೆಸರು ತೆಗೆದುಕೊಂಡು ಹೇಳಿಲ್ಲ. ತಾಳಿ ಕಟ್ಟುವ ಮುಂಚೆ ಯಾವ ಹೆಣ್ಣೂ ಮದುವೆ ಆಗಿದೆ ಎಂದು ಹೇಳಲ್ಲ. ಈಗ ಬಂದು ನೋಡಿಕೊಂಡು ಹೋಗಿದ್ದು, ತಾಳಿ ಕಟ್ಟಿದ ಮೇಲೆಯೇ ಹೆಂಡ್ತಿ ಅಂತ ಹೇಳಬೇಕು. ನಮ್ಮ ನಾಯಕರು ಡೋರ್ ಓಪನ್ ಇಟ್ಟಿದ್ದು, ಶೇ.100 ಮಾತುಕತೆ ನಡೆದಾಗ ಅವರ ಪಕ್ಷ ಸೇರ್ಪಡೆ ಖಚಿತವಾಗುತ್ತದೆ ಎಂದರು.
ಈ ಹಿಮ್ದೆಯೂ ಇಬ್ರಾಹಿಂ, "ಜೆಡಿಎಸ್ ಪಕ್ಷ ಜನರಿಗಾಗಿ ಇರುವ ಪಕ್ಷ. ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ರಮೇಶ್ ಜಾರಕಿಹೊಳಿ ಅಥವಾ ಯಾರು ಬರುತ್ತಾರೆಯೋ ಅಂಥವರಿಗೆ ಜಿಲ್ಲಾ ಮಟ್ಟದಲ್ಲಿನ ನಾಯಕರೊಂದಿಗೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು" ಎಂದು ಹೇಳಿದ್ದರು.