ಬೆಂಗಳೂರು, ನ 29 (daijiworldews/HR): ಮತದಾರರ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಈಗಾಗಲೇ ಬಂಧಿಸಿದ್ದು, ಇದರಿಂದಾಗಿ ಭೀತರಾಗಿರುವ ಬಿಬಿಎಂಪಿ ಆರ್ಒ, ಎಆರ್ಒಗಳು ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದಾರೆ.
ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ನೇಮಕವಾಗಿದ್ದ ಚಿಲುಮೆ ಸಂಸ್ಥೆ ಸಿಬ್ಬಂದಿಗೆ ಗುರುತಿನ ಚೀಟಿ ನೀಡಿರುವುದು ಸೇರಿ ಇನ್ನಿತರ ಕಾರಣಕ್ಕಾಗಿ ಬಿಬಿಎಂಪಿಯ ಮೂವರು ಆರ್ಒ ಹಾಗೂ ಒಬ್ಬರು ಎಆರ್ಒ ಬಂಧಿಸಲಾಗಿದೆ.
ಇನ್ನು ಚುನಾವಣಾ ಆರ್ಒ, ಎಆರ್ಒಗಳಿಗೆ ಬಂಧನದ ಭೀತಿ ಎದುರಾಗಿದ್ದು, 180ಕ್ಕೂ ಹೆಚ್ಚಿನ ಆರ್ಒ, ಎಆರ್ಒಗಳು ನ್ಯಾಯಾಲಯದಲ್ಲಿ ನಿರೀ ಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.