ಮೆಹ್ಸಾನಾ (ಗುಜರಾತ್), ನ 29 (DaijiworldNews/DB): ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭಾಷಣ ಮಾಡುತ್ತಿದ್ದ ಸಭೆಗೆ ಗೂಳಿ ನುಗ್ಗಿ ಬಂದಿರುವುದನ್ನು ಬಿಜೆಪಿಯ ಪಿತೂರಿ ಎಂದು ಗೆಹ್ಲೋಟ್ ಕಿಡಿ ಕಾರಿದ್ದಾರೆ.
ಗುಜರಾತ್ನ ಮೆಹ್ಸಾನಾದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಚುನಾವಣಾ ರ್ಯಾಲಿಯಲ್ಲಿ ಅಶೋಕ್ ಗೆಹ್ಲೋಟ್ ಮಾತನಾಡುತ್ತಿದ್ದ ವೇಳೆ ಸಭೆಗೆ ಗೂಳಿಯೊಂದು ನುಗ್ಗಿ ಬಂದಿತ್ತು. ಗೂಳಿಯ ಅವಾಂತರದಿಂದ ಸಭೆಯಲ್ಲಿ ಸೇರಿದ್ದವರೆಲ್ಲಾ ಆತಂಕದಿಂದ ದಿಕ್ಕಾಪಾಲಾಗಿ ಓಡಿದ್ದರು. ಈ ವೇಳೆ ಜನರನ್ನು ಶಾಂತರಾಗಿರುವಂತೆ ಹೇಳಿದ ಗೆಹ್ಲೋಟ್ ಇದೇ ವೇಳೆ ಬಿಜೆಪಿ ವಿರುದ್ದ ಕಿಡಿ ಕಾರಿದ್ದಾರೆ.
ಎಳವೆಯಿಂದಲೂ ನಾನು ನಡೆಸುವ ಸಭೆಗಳಿಗೆ ಬಿಜೆಪಿಗರು ಗೂಳಿ, ಹಸುಗಳನ್ನು ಬಿಡುತ್ತಲೇ ಇದ್ದಾರೆ. ಇದೂ ಕೂಡಾ ಅವರದ್ದೇ ಪಿತೂರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ಸಭೆಗಳಿಗೆ ಅಡ್ಡಿಪಡಿಸಲು ಬಿಜೆಪಿಗರು ಇನ್ನಷ್ಟು ತಂತ್ರಗಳನ್ನು ಹೂಡಲಿದ್ದಾರೆ. ಆದರೆ ಅವರ ತಂತ್ರಗಳನ್ನು ಜನ ಗಮನಿಸುತ್ತಿದ್ದಾರೆ ಎಂದರು.