ಆಂಧ್ರಪ್ರದೇಶ, ನ 28 (DaijiworldNews/HR): ಕೆ ಸಿ ಆರ್ ಪಕ್ಷದ ಕಾರ್ಯಕರ್ತರ ನಡುವಿನ ಸಂಘರ್ಷಕ್ಕೆ ಕಾರಣವಾದ ಬಳಿಕ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಅವರ ಸಹೋದರಿ ವೈ ಎಸ್ ಶರ್ಮಿಳಾ ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ವೈಎಸ್ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಅವರನ್ನು ತೆಲಂಗಾಣದ ವಾರಂಗಲ್ನಲ್ಲಿ ನಡೆದ ಮೆರವಣಿಗೆಯಲ್ಲಿ ಟಿಆರ್ಎಸ್ ನಾಯಕರ ದೂರಿನ ನಂತರ ಬಂಧಿಸಲಾಗಿದೆ.
ಟಿಆರ್ಎಸ್ ಗೆ ಸೇರಿದವರೆಂದು ಹೇಳಲಾದವರು ವಾರಂಗಲ್ ನಲ್ಲಿ ಶರ್ಮಿಳಾ ಪ್ರಚಾರ ಬಸ್ ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದದು, ಶರ್ಮಿಳಾ ಟಿಆರ್ಎಸ್ ಶಾಸಕ ಸುದರ್ಶನ್ ಅವರ ಬಗ್ಗೆ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ನಂತರ ಈ ದಾಳಿ ನಡೆದಿದೆ.
ಇನನು ಟಿಆರ್ ಎಸ್ ಸರ್ಕಾರದ ಪಿತೂರಿಯ ಭಾಗವಾಗಿ ಮೆರವಣಿಗೆ ವೇಳೆ ಬಸ್ ಗೆ ಬೆಂಕಿ ಹಚ್ಚಲಾಗಿತ್ತು ಎಂದು ಬಂಧನಕ್ಕೆ ಮುನ್ನ ಶರ್ಮಿಳಾ ಟ್ವೀಟ್ ಮಾಡಿದ್ದರು.