ಚಂಡಿಗಢ, ನ 28 (DaijiworldNews/HR): ಪಂಜಾಬ್ನ ಕಿರಾತ್ಪುರ ಸಾಹಿಬ್ನಲ್ಲಿ ಹಣ್ಣು ಕೀಳಲು ಹೋಗಿ ಮೂರು ಮಕ್ಕಳು ರೈಲಿಗೆ ಸಿಲುಕಿ ಸಾವನ್ನಪ್ಪಿ, ಒಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಮಕ್ಕಳು ಹಣ್ಣುಗಳನ್ನು ಕಿತ್ತಲು ಹಳಿಗಳ ಮೇಲೆ ನಿಂತಿದ್ದು, ಈ ವೇಳೆ ರೈಲು ತಮ್ಮ ಬಳಿಗೆ ಬರುತ್ತಿದೆ ಎಂದು ಅವರು ಗಮನಿಸಿಲ್ಲ ಎಂದು ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಜಗಜಿತ್ ಸಿಂಗ್ ತಿಳಿಸಿದ್ದಾರೆ.
ಇನ್ನು ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಮಕ್ಕಳು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ನಾಲ್ಕನೆಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.