ಭೋಪಾಲ, ನ 27 (DaijiworldNews/DB): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶದಲ್ಲಿ ಸಾಗುತ್ತಿದ್ದು, ಭಾನುವಾರ ರಾಹುಲ್ ಗಾಂಧಿ ಬೈಕ್ ಸವಾರಿ ಮಾಡಿ ಗಮನ ಸೆಳೆದಿದ್ದಾರೆ.
ಪಾದಯಾತ್ರೆ ವೇಳೆ ಬೈಕ್ ಸವಾರರಾದ ರಜತ್ ಪಾರಾಶರ್ ಮತ್ತು ಸಾರ್ಥಕ್ ಅವರನ್ನು ಭೇಟಿ ಮಾಡಿದ ರಾಹುಲ್, ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಅವರೊಂದಿಗಿದ್ದ ಜರ್ಮನ್ ಶೆಫರ್ಡ್ ಶ್ವಾನದೊಂದಿಗೆ ಸಮಯ ಕಳೆದರು. ಆನಂತರ ಬೈಕ್ ಸವಾರರಲ್ಲೊಬ್ಬರ ಬೈಕ್ನಲ್ಲಿ ಸವಾರಿ ಮಾಡಿದರು.
ಬೈಕ್ ಸವಾರ ರಜತ್ ಈ ಕುರಿತು ಪ್ರತಿಕ್ರಿಯಿಸಿ, ರಾಹುಲ್ ಗಾಂಧಿಯವರು ಪ್ರಾಣಿ ಪ್ರೇಮಿ. ರಸ್ತೆಯಲ್ಲಿ ಪ್ರಾಣಿಗಳು ಸಾವನ್ನಪ್ಪುತ್ತಿರುವ ಬಗ್ಗೆ ಅವರಲ್ಲಿ ಚರ್ಚಿಸಿದೆ. ಅವರೊಬ್ಬ ಅದ್ಬುತ ವ್ಯಕ್ತಿ ಎಂದರು.