ಶ್ರೀನಗರ, ನ 27 (DaijiworldNews/DB): ಕಾಶ್ಮೀರದ ಮೂರು ಜಿಲ್ಲೆಗಳು ಉಗ್ರರಿಂದ ಮುಕ್ತವಾಗಿವೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾಶ್ಮೀರ ವಲಯ) ವಿಜಯ್ ಕುಮಾರ್ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಶನಿವಾರ ಈ ಕುರಿತು ಮಾತನಾಡಿರುವ ಅವರು, ಕಾಶ್ಮೀರದ ಮೂರು ಜಿಲ್ಲೆಗಳಾದ ಬಂಡಿಪೊರ, ಕುಪ್ವಾರ ಮತ್ತು ಗಾಂದರ್ಬಲ್ ಜಿಲ್ಲೆಗಳಲ್ಲಿ ಉಗ್ರರ ಚಟುವಟಿಕೆಗಳನ್ನು ಸಂಪೂರ್ಣ ನಿಯಂತ್ರಿಸಲಾಗಿದೆ. ಈ ಜಿಲ್ಲೆಗಳು ಉಗ್ರರಿಂದ ಮುಕ್ತವಾಗಿವೆ ಎಂದರು.
ಸತತ ಕಾರ್ಯಾಚರಣೆ ಮತ್ತು ಎನ್ಕೌಂಟರ್ ಮೂಲಕ ಭಾರತೀಯ ಸೇನೆಯು ಲಷ್ಕರ್-ಎ-ತೈಯಬಾ ಮತ್ತು ಜೈಷ್-ಎ-ಮಹಮ್ಮದ್ನಂತಹ ಉಗ್ರ ಸಂಘಟನೆಗಳಿಗೆ ಸೇರಿದ ಭಯೋತ್ಪಾದಕರನ್ನು ನಿರ್ನಾಮ ಮಾಡಿದೆ ಎಂದವರು ತಿಳಿಸಿದರು.
ಇನ್ನು ಬಂಡಿಪೊರ ಮತ್ತು ಕುಪ್ವಾರದಲ್ಲಿ ಕನಿಷ್ಠ ಏಲು ಮಂದಿ ವಿದೇಶೀ ಭಯೋತ್ಪಾದಕರಿರುವ ಬಗ್ಗೆ ಮಾಹಿತಿ ಲಭ್ಯವಾಗಿಗಿದೆ. ಕಾಶ್ಮೀರದ 13 ಜಿಲ್ಲೆಗಳಲ್ಲಿ 29 ಸ್ಥಳೀಯ ಭಯೋತ್ಪಾದಕರು, 52 ಪಾಕಿಸ್ತಾನ ಭಯೋತ್ಪಾದಕರು ಸೇರಿ 81 ಮಂದಿ ಮಂದಿ ಭಯೋತ್ಪಾದಕರಿರುವ ಬಗ್ಗೆ ಗೊತ್ತಾಗಿದೆ. ಸೇನೆಯು ಭಯೋತ್ಪಾದಕರನ್ನು ಸದೆ ಬಡಿಯಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಭಯೋತ್ಪಾದನೆಯನ್ನು ಕಾಶ್ಮೀರದಲ್ಲಿ ಸಂಪೂರ್ಣವಾಗಿ ನಿರ್ಮೂಲನೆಗೊಳಿಸುತ್ತೇವೆ ಎಂದವರು ಇದೇ ವೇಳೆ ಭರವಸೆ ನೀಡಿದರು.