ಹೈದರಾಬಾದ್, ನ 27 (DaijiworldNews/DB): ವಿದೇಶದಿಂದ ತಂದಿದ್ದ ಚಾಕೊಲೇಟ್ ಸೇವಿಸುವ ವೇಳೆ ಎಂಟು ವರ್ಷದ ಬಾಲಕನೊಬ್ಬ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ತೆಲಂಗಾಣದ ವಾರಂಗಲ್ ಪಟ್ಟಣದಲ್ಲಿ ನಡೆದಿದೆ.
ಎಲೆಕ್ಟ್ರಿಕಲ್ ಅಂಗಡಿ ನಡೆಸುತ್ತಿರುವ ಕಂಗಾನ್ ಸಿಂಗ್ ಅವರ ಪುತ್ರ ಸಂದೀಪ್ ಸಿಂಗ್ ಮೃತ ಬಾಲಕ. ಕಂಗಾನ್ ಸಿಂಗ್ ಆಸ್ಟ್ರೇಲಿಯಾ ಪ್ರವಾಸದಿಂದ ಹಿಂತಿರುಗುವಾಗ ಮಕ್ಕಳಿಗಾಗಿ ಚಾಕೊಲೇಟ್ ತಂದಿದ್ದರು. ಸಂದೀಪ್ ಈ ಚಾಕಲೇಟ್ನ್ನು ತನ್ನ ಶಾಲೆಗೂ ಕೊಂಡೊಯ್ದಿದ್ದು, ಬಳಿಕ ತಾನೂ ಶಾಲೆಯಲ್ಲಿ ತಿಂದಿದ್ದಾನೆ. ಈ ವೇಲೆ ಅದು ಗಂಟಲಲ್ಲಿ ಸಿಲುಕಿಕೊಂಡಿದೆ. ಇದರಿಂದ ಉಸಿರಾಡಲಾಗದೆ ವಿದ್ಯಾರ್ಥಿ ಕುಸಿದು ಬಿದ್ದಿದ್ದಾನೆ.
ಕೂಡಲೇ ಶಾಲೆಯ ಶಿಕ್ಷಕರು ಆತನನ್ನು ಸರ್ಕಾರಿ ಎಂಜಿಎಚ್ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ವೈದ್ಯರು ಎಷ್ಟೇ ಪ್ರಯತ್ನಪಟ್ಟರೂ ಬದುಕಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ. ಈ ಕುಟುಂಬವು ರಾಜಸ್ಥಾನ ಮೂಲದವರಾಗಿದ್ದು, ಎಲೆಕ್ಟ್ರಿಕಲ್ ಅಂಗಡಿ ಸುಮಾರು 20 ವರ್ಷಗಳ ಹಿಂದೆ ವಾರಂಗಲ್ಗೆ ವಲಸೆ ಬಂದಿದ್ದರು.