ಚಿತ್ರದುರ್ಗ, ನ 27 (DaijiworldNews/HR): ಚಿತ್ರದುರ್ಗದ ಕೈನಡು ಗ್ರಾಮದ ಬಳಿ ಬೈಕಿಗೆ ಟ್ಯಾಂಕರ್ ಡಿಕ್ಕಿಯಾಗಿ ಒಂದೇ ಬೈಕಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ಕೈನಡು ಗ್ರಾಮದ ಉಜ್ಜೀರಪ್ಪ (38), ರವಿಕುಮಾರ್ (29), ಗಿರೀಶ್ (23) ಮೃತಪಟಟ್ವರು.
ಶನಿವಾರ ತಡರಾತ್ರಿ ಹೊಸದುರ್ಗದಿಂದ ಕೈನಡು ಗ್ರಾಮಕ್ಕೆ ತೆರಳುವ ಸಂದರ್ಭ ಈ ಅಪಘಾತ ಸಂಭವಿಸಿದೆ.
ಈ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.