ಶಿರಸಿ, ನ 26 (DaijiworldNews/HR): ಬನವಾಸಿಯ ದಾಸನಕೊಪ್ಪ ವೃತ್ತದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವಿಗೆ ಹಾವು ಕಚ್ಚಿ ಮೃತಪಟ್ಟ ಘಟನೆ ಸಂಭವಿಸಿದೆ.
ತರಾನ್ ಮಹಮದ್ ಸಾಬ್ (2) ಮೃತ ಮಗು.
ಮೊದಲಿಗೆ ಮಗುವಿಗೆ ಏನೋ ಕಚ್ವಿದೆ ಎಂದು ಪಾಲಕರಿಗೆ ಮಗು ಹೇಳಿದರೂ ಇರುವೆ ಇರಬೇಕು ಎಂದು ಭಾವಿಸಿದ್ದರು. ಆದರೆ ಅದು ಹಾವು ಎಂಬುದು ಮಗು ಬಾಯಿಯಿಂದ ನೊರೆ ಸುರಿಸಿದಾಗ ಗೊತ್ತಾಗಿದೆ.
ಈ ಬಗ್ಗೆ ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.