ನವದೆಹಲಿ, ನ 26 (DaijiworldNews/DB): ಜನರೇ ನ್ಯಾಯಾಂಗವನ್ನು ತಲುಪುವುದಲ್ಲ, ನ್ಯಾಯಾಂಗವೇ ಜನರನ್ನು ತಲುಪುವುದು ಇಂದಿನ ತುರ್ತು ಅಗತ್ಯ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಪ್ರತಿಪಾದಿಸಿದ್ದಾರೆ.
ಸಂವಿಧಾನ ದಿನದ ಅಂಗವಾಗಿ ದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಯಾಂಗ ಜನರನ್ನು ತಲುಪುವುದು ಅತ್ಯಗತ್ಯ. ಎಲ್ಲರಿಗೂ ನ್ಯಾಯ ಪ್ರವೇಶಿಸಬೇಕು ಎಂದರು.
ಸರ್ವರಿಗೂ ನ್ಯಾಯ ಲಭ್ಯತೆ ವೈವಿಧ್ಯ ರಾಷ್ಟ್ರದಲ್ಲಿ ನ್ಯಾಯಾಂಗ ಎದುರಿಸುವ ಪ್ರಮುಖ ಸವಾಲಾಗಿದೆ. ನ್ಯಾಯ ಎಲ್ಲರಿಗೂ ಸಿಗುವಂತಾಗಲು ಭಾರತೀಯ ನ್ಯಾಯಾಂಗವು ಹಲವು ಸುಧಾರಣಾ ವಿಷಯಗಳಿಗೆ ಮುಂದಾಗುತ್ತಿದೆ ಎಂದು ಅವರು ತಿಳಿಸಿದರು.
ದೆಹಲಿಯ ತಿಲಕ್ ಮಾರ್ಗ್ನಲ್ಲಿ ಸುಪ್ರೀಂಕೋರ್ಟ್ ನೆಲೆಗೊಂಡಿದ್ದರೂ, ಇದು ಇಡೀ ದೇಶದ ಜನರಿಗೆ ಇರುವ ಸುಪ್ರೀಂಕೋರ್ಟ್. ವರ್ಚುವಲ್ ಪ್ರವೇಶಗಳು ಪ್ರಸ್ತುತ ವಕೀಲರಿಗೆ ಅವರದೇ ಸ್ಥಳಗಳಿಂದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾದಿಸಲು ಸುಲಭ ಸಾಧ್ಯವಾಗಿದೆ. ತಂತ್ರಜ್ಞಾನಗಳ ಅಳವಡಿಕೆಯಿಂದ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.