ನವದೆಹಲಿ, ನ 25 (DaijiworldNews/HR): ನಾವು ಯಾವು ರಾಜ್ಯಗಳಲ್ಲಿ ಸರ್ಕಾರಗಳನ್ನ ಹೊಂದಿದ್ದೇವೆಯೋ ಅಲ್ಲಿ ಮತಾಂತರದ ವಿರುದ್ಧ ಕಾನೂನು ಇದೆ ಮತ್ತು ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಯಾರು ಬೇಕಾದರೂ ತಮ್ಮ ಧರ್ಮವನ್ನ ಪ್ರಚಾರ ಮಾಡಬಹುದು. ಆದರೆ ಆಮಿಷವೊಡ್ಡುವ ಮೂಲಕ, ಹಣವನ್ನ ನೀಡುವ ಮೂಲಕ ಅಥವಾ ಬಲವಂತವಾಗಿ ಯಾರ ಧರ್ಮವನ್ನ ಬದಲಾಯಿಸಲಾಗುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮತಾಂತರ ಕಾನೂನು ಕುರಿತ ಸಮಾರಂಭದಲ್ಲಿ ಮಾತನಾಡಿದ ಅವರು, ಮತಾಂತರದ ವಿರುದ್ಧ ನಾವು ಕಾನೂನುಗಳನ್ನ ಮಾಡಿದ್ದೇವೆ ಮತ್ತು ಅವುಗಳನ್ನ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ರಾಜ್ಯಗಳ ಮತಾಂತರ ಕಾನೂನುಗಳು ಆಮಿಷ ಒಡ್ಡುವಿಕೆ ಮತ್ತು ಇತರ ಮಾರ್ಗಗಳ ಮೂಲಕ ಜನರನ್ನ ಮತಾಂತ ರಗೊಳಿಸುವ ನಡುವಿನ ವ್ಯತ್ಯಾಸವನ್ನ ತೋರಿಸುತ್ತವೆ ಎಂದರು.
ಇನ್ನು ದೆಹಲಿಯ ಶ್ರದ್ಧಾ ಕೊಲೆ ಪ್ರಕರಣದಲ್ಲಿ ಅಪರಾಧಿಯು ಅತ್ಯಂತ ಕಠಿಣ ಶಿಕ್ಷೆಯನ್ನ ನೀಡೋದನ್ನ ನ್ಯಾಯಾಲಯದ ಮೂಲಕ ಸರ್ಕಾರ ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ.