ತಮಿಳುನಾಡುನ, 24 (DaijiworldNews/HR): ಶಸ್ತ್ರಾಸ್ತ್ರ ತಯಾರಿಕಾ ಘಟಕದಲ್ಲಿ ಗುರುವಾರ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಇಬ್ಬರು ಕಾರ್ಮಿಕರು ಗಾಯಗೊಂಡಿರುವ ಘಟನೆ ತಮಿಳುನಾಡಿದ ನೀಲಗಿರೀಸ್ ಜಿಲ್ಲೆಯ ಕೂನೂರು ಬಳಿಯ ಅರುವಂಕಾಡುವಿನಲ್ಲಿ ನಡೆದಿದೆ.
ವೆಲ್ಡಿಂಗ್ ವಿಭಾಗದಲ್ಲಿ ಬೆಂಕಿ ಅವಘಡ ಸಂಭವಿಸಿದ ತಕ್ಷಣ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಇನ್ನು ಇದೇ ತಿಂಗಳ 18ರಂದು ಕಾರ್ಡೈಟ್ ವಿಭಾಗದಲ್ಲೂ ಸ್ಫೋಟ ಸಂಭವಿಸಿ 8 ಮಂದಿ ಗಾಯಗೊಂಡಿದ್ದು, ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.