ಚೆನ್ನೈ, ನ 24 (DaijiworldNews/DB): ತಾಯಿ ನೋಡಿದ ವರನನ್ನು ವಿವಾಹವಾಗಲು ಒಲ್ಲೆ ಎಂದ ಮಗಳನ್ನು ತಾಯೊಯೇ ಕತ್ತು ಹಿಸುಕಿ ಹತ್ಯಗೈದ ಘಟನೆ ಚೆನ್ನೈನಲ್ಲಿ ಬುಧವಾರ ನಡೆದಿದೆ.
ಪಿ. ಅರುಣಾ (20) ಕೊಲೆಯಾದವರು. ಕೊಯಮತ್ತೂರಿನಲ್ಲಿ ನರ್ಸ್ ಆಗಿದ್ದ ಅರುಣಾಳಿಗೆ ಕುಟುಂಬದವರು ವರನನ್ನು ನಿಶ್ಚಯ ಮಾಡಿದ್ದರು. ಆದರೆ ಈ ಹುಡುಗನನ್ನು ಅರುಣಾ ಒಲ್ಲೆ ಎಂದಿದ್ದಳು. ಅಲ್ಲದೆ ಬುಧವಾರ ಹುಡುಗಿ ನೋಡಲು ಬರಬೇಕಿದ್ದ ತಾಯಿ ನೋಡಿದ ವರನ ಕುಟುಂಬ ಮನೆಗೆ ಆಗಮಿಸುವುದಕ್ಕೂ ವಿರೋಧಿಸಿದ್ದಳು.
ಈ ವಿಚಾರವಾಗಿ ತಾಯಿ ಮತ್ತು ಮಗಳ ನಡುವೆ ಗಲಾಟೆ ನಡೆದಿದೆ. ಇದರಿಂದ ಮರ್ಯಾದೆಗೇಡು ಎಂದು ಯೋಚಿಸಿದ ತಾಯಿ ಹೆತ್ತ ಮಗಳನ್ನು ಕತ್ತು ಹಿಸುಕಿ ಕೊಲೆಗೈದಿದ್ದಾಳೆ. ಅರುಣಾ ಅವರ ತಂದೆ ಮತ್ತು ಸಹೋದರ ಚೆನ್ನೈನಲ್ಲಿ ಆಟೋ ಚಾಲಕರಾಗಿದ್ದಾರೆ.