ಗುಜರಾತ್, ನ 24 (DaijiworldNews/HR): ಮೊರ್ಬಿ ತೂಗು ಸೇತುವೆ ಕುಸಿತ ಪ್ರಕರಣದಲ್ಲಿ ಬಂಧಿಸಲಾಗಿರುವ ಒಂಬತ್ತು ಆರೋಪಿಗಳ ಪೈಕಿ ಎಂಟು ಜನರ ಜಾಮೀನು ಅರ್ಜಿಗಳನ್ನು ಕೋರ್ಟ್ ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ.
ಅರ್ಜಿಗಳ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪಿ.ಸಿ.ಜೋಶಿ,'ಒಂಬತ್ತನೇ ಆರೋಪಿ ದೇವಾಂಗ ಪರ್ಮಾರ ಅವರ ಜಾಮೀನು ಅರ್ಜಿ ಕುರಿತು ಇಂದು ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.
ಇನ್ನು ಗುಜರಾತ್ನ ಮೊರ್ಬಿಯಲ್ಲಿ ಕೇಬಲ್ ತೂಗು ಸೇತುವೆ ಕುಸಿತಗೊಂಡು 134ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಘಟನೆಗೆ ಇತ್ತೀಚೆಗೆ ನಡೆದಿತ್ತು.
ನವೀಕರಣ ಹಿನ್ನೆಲೆಯಲ್ಲಿ ಏಳು ತಿಂಗಳ ಕಾಲ ಮುಚ್ಚಿದ್ದ ಬ್ರಿಟಿಷರ ಕಾಲದ ಈ ಸೇತುವೆಯನ್ನು ನೋಡಲು ಜನರು ಮುಗಿ ಬಿದ್ದು ಸೇತುವೆ ತುಂಡಾಗಿ ಸೇತುವೆ ಮೇಲಿದ್ದ ಹಲವರು ನೀರುಪಾಲಾಗಿದ್ದರು.