ಚಿಕ್ಕಮಗಳೂರು, ನ 24 (DaijiworldNews/HR): ಶೃಂಗೇರಿ ತಾಲೂಕಿಗೆ ನೂರು ಬೆಡ್ ಗಳ ಆಸ್ಪತ್ರೆ ನಿರ್ಮಾಣದ ಕೆಲಸ ಇನ್ನು ಕಾರ್ಯರೂಪಗೊಳ್ಳದ ಹಿನ್ನೆಲೆಯಲ್ಲಿ ಯುವಕರ ತಂಡ ಅಧಿಕಾರಗಳ ವಿರುದ್ಧ ವಿಶೇಷ ರೀತಿಯ ಪ್ರತಿಭಟನೆಗೆ ಮುಂದಾಗಿದೆ.
ಆಸ್ಪತ್ರೆ ಮಂಜೂರು ಮಾಡಲು ಊರಿನ ಜನ ಕಳೆದ ಒಂದು ವರ್ಷದಿಂದ ಹೋರಾಟ ನಡೆಸಿಕೊಂಡು ಬಂದರೂ ಯಾವುದೇ ಪ್ರಯೋಜನವಾಗದಿದ್ದು, ಯುವಕರ ತಂಡ ರಾತ್ರೋ ರಾತ್ರಿ ಶೃಂಗೇರಿ ಪಟ್ಟಣ ತುಂಬಾ ತಮಟೆ ಬಾರಿಸಿ ಧರಣಿ ಸತ್ಯಾಗ್ರಹದ ಬಗ್ಗೆ ಪ್ರಚಾರ ಮಾಡಲು ಮುಂದಾಗಿದ್ದಾರೆ.
ಇನ್ನು ಪ್ರಚಾರದ ವೇಳೆ ಮೈಕ್ ಬಳಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಯುವಕರು ತಮಟೆ ಬಾರಿಸಿ ನಾಳೆಯಿಂದ ಅಹೋರಾತ್ರಿ ಧರಣಿ ನಡೆಸುವುದಾಗಿ ಕರೆ ನೀಡಿದ್ದಾರೆ.