ನವದೆಹಲಿ, ನ 23 (DaijiworldNews/DB): ವಿವಾಹಿತನೋರ್ವ ಸ್ನೇಹಿತೆಯನ್ನು ಗುಂಡಿಕ್ಕಿ ಹತ್ಯೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಗೀತಾ ಮೃತಪಟ್ಟ ಮಹಿಳೆ. ಇನ್ನು ಆರೋಪಿ ಪ್ರವೀಣ್ ಅಲಿಯಾಸ್ ಸೀಟು ಗಂಭೀರ ಗಾಯಗೊಂಡಿದ್ದು, ಸಂಜಯ್ ಗಾಂಧಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾನೆ. ದೆಹಲಿಯ ನರೆಲಾ ಪ್ರದೇಶದ ಓಯೋ ಹೋಟೆಲ್ ರೂಂಗೆ ಇವರಿಬ್ಬರು ಮಂಗಳವಾರ ಆಗಮಿಸಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಗೀತಾಳ ಎದೆಗೆ ಆರೋಪಿ ಪಿಸ್ತೂಲ್ನಿಂದ ಹೊಡೆದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬಳಿಕ ತಾನೂ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಆರೋಪಿ ಈ ಹಿಂದೆಯೂ ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದು, ಜೈಲಿನಲ್ಲಿದ್ದ. ಬಳಿಕ ಜಾಮೀನಿನ ಮೇಲೆ ಸೆಪ್ಟೆಂಬರ್ 21ರಂದು ಬಿಡುಗಡೆಯಾಗಿದ್ದ ಎಂದು ತಿಳಿದು ಬಂದಿದೆ.