ಪಣಜಿ, ನ 23 (DaijiworldNews/DB): ಇಸ್ಲಾಂ ವಿವಾದಾತ್ಮಕ ಮತ ಪ್ರಚಾರಕ ಜಾಕೀರ್ ನಾಯ್ಕ್ಗೆ ಫಿಫಾ ವಿಶ್ವಕಪ್ನಲ್ಲಿ ಇಸ್ಲಾಂ ಕುರಿತು ಉಪನ್ಯಾಸ ನೀಡುವಂತೆ ಆಹ್ವಾನಿಸಿರುವುದರಿಂದ ಫಿಫಾ ವಿಶ್ವಕಪ್ನ್ನು ಬಹಿಷ್ಕರಿಸಬೇಕೆಂದು ಒತ್ತಾಯಿಸಿ ಬಿಜೆಇ ವಿಕ್ತಾರ ಸವಿಯೊ ರಾಡ್ರಿಗಸ್ ಗೋವಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಜಾಕೀರ್ ನಾಯ್ಕ್ ಭಾರತದಿಂದ ಪರಾರಿಯಾಗಿದ್ದಾನೆ. ಜಗತ್ತೇ ಭಯೋತ್ಪಾದನೆಯ ವಿರುದ್ದ ನಿಂತಿರುವ ಸಂದರ್ಭದಲ್ಲಿ ಆತನನ್ನು ಉಪನ್ಯಾಸ ನೀಡಲು ಕತಾರ್ ಆಹ್ವಾನಿಸಿರುವುದು ಸರಿಯಲ್ಲ. ಆತನಿಗೆ ವೇದಿಕೆ ನೀಡುವುದರಿಂದ ದ್ವೇಷ ಹರಡಲು ಅವಕಾಶ ಕೊಟ್ಟಂತಾಗುತ್ತದೆ ಎಂದವರು ಮನವಿಯಲ್ಲಿ ತಿಳಿಸಿದ್ದಾರೆ.
ಜಾಕೀರ್ಗೆ ವೇದಿಕೆ ನೀಡಿದರೆ ಭಯೋತ್ಪಾದಕ ಸಹಾನುಭೂತಿ ವ್ಯಕ್ತಪಡಿಸಿದಂತಾಗುತ್ತದೆ. ಹೀಗಾಗಿ ಫಿಫಾ ವಿಶ್ವಕಪ್ಗೆ ಬಹಿಷ್ಕಾರ ಹಾಕಬೇಕು ಎಂದವರು ಒತ್ತಾಯಿಸಿದ್ದಾರೆ.