ನವದೆಹಲಿ, ನ 23 (DaijiworldNews/MS): ದೆಹಲಿಯ ಪಾಲಂನಲ್ಲಿ ಕುಟುಂಬದ ನಾಲ್ವರನ್ನು ಇರಿದು ಹತ್ಯೆ ಮಾಡಿದ ಭೀಕರ ಘಟನೆ ವರದಿಯಾಗಿದೆ.ಆರೋಪಿ ಪುತ್ರ ಕೇಶವ್ಎಂಬಾತನೇ ಮನೆಯಲ್ಲಿ ಮಲಗಿದ್ದ ತಂದೆ, ಅಜ್ಜಿ, ಇಬ್ಬರು ಸಹೋದರಿಯರು ಸೇರಿ ಒಟ್ಟು ನಾಲ್ವರನ್ನು ಚಾಕುವಿನಿಂದ ಇರಿದು ಮಂಗಳವಾರ ಕೊಲೆಗೈದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮನೆಯ ಇಬ್ಬರು ಸದಸ್ಯರು ಸ್ನಾನಗೃಹದಲ್ಲಿ ಕೊಲೆಯಾಗಿದ್ದಾರೆ. ಮೃತದೇಹಗಳು ಮನೆಯ ಆವರಣದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ವಿಷಯ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿ ಕೇಶವನನ್ನು ವಶಕ್ಕೆ ಪಡೆದಿದಿದ್ದಾರೆ
ಕೇಶವ ಮಾದಕ ವ್ಯಸನಿಯಾಗಿದ್ದ ಎಂದು ಹೇಳಲಾಗಿದ್ದು, ಆರೋಪಿಗೆ ಸ್ಥಿರವಾದ ಕೆಲಸ ಇಲ್ಲದ ಕಾರಣ ಕುಟುಂಬ ಸದಸ್ಯರ ನಡುವಿನ ಜಗಳವೇ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.