ಕೋಲ್ಕತ್ತಾ, ನ 20 (DaijiworldNews/MS): ಪಶ್ಚಿಮ ಬಂಗಾಲದಲ್ಲಿ ವ್ಯಕ್ತಿಯೊಬ್ಬರ ಪಡಿತರ ಚೀಟಿಯಲ್ಲಿ ಅಧಿಕಾರಿಗಳು, ದತ್ತಾ ಬದಲಿಗೆ ಕುತ್ತಾ(ನಾಯಿ) ಎಂದು ಬರೆದಿದ್ದ ಕಾರಣ ನೊಂದ ವ್ಯಕ್ತಿಯೊಬ್ಬ ಸರಕಾರಿ ಅಧಿಕಾರಿಯ ಎದುರು ಬೌ..ಬೌ..ಬೌ..ಎಂದು ಬೊಗಳಿ ಆಕ್ರೋಶ ಹೊರ ಹಾಕಿದ ವಿಚಿತ್ರ ಘಟನೆ ನಡೆದಿದ್ದು ಈ ವಿಡಿಯೋ ವೈರಲ್ ಆಗಿದೆ.
ರೇಷನ್ ಕಾರ್ಡ್ ನಲ್ಲಿ ಮೂರು ಬಾರಿ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ್ದೆ. ಮೂರನೇ ಬಾರಿಯೂ ನನ್ನ ಹೆಸರನ್ನು ಶ್ರೀಕಾಂತಿ ದತ್ತಾ ಎಂದು ಬರೆಯುವ ಬದಲು ಶ್ರೀಕಾಂತಿ ಕುತ್ತಾ ಎಂದು ಬರೆಯಲಾಗಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದೇನೆ ್. ಹೀಗಾಗಿ ನಾನು ವಿಭಿನ್ನವಾಗಿ ಪ್ರತಿಭಟಿಸಬೇಕಾಗಿದೆ ಎಂದು ಶ್ರೀಕಾಂತಿ ದತ್ತಾ ಮಾಧ್ಯಮಗಳ ಎದುರು ನೋವು ಹೊರ ಹಾಕಿದ್ದಾರೆ.
ನಾನು ಮತ್ತೆ ಮತ್ತೆ ಕರೆಕ್ಷನ್ ಗೆ ಅರ್ಜಿ ಹಾಕಲು ಹೋಗುತ್ತಿದ್ದೆ. ಅಲ್ಲಿ ಜಂಟಿ ಬಿಡಿಓ ಅವರನ್ನು ನೋಡಿ ಅವರ ಮುಂದೆ ನಾಯಿಯಂತೆ ವರ್ತಿಸತೊಡಗಿದೆ. ಅವರು ನನ್ನ ಪ್ರಶ್ನೆಗೆ ಪ್ರತಿಕ್ರಿಯಿಸದೆ ಓಡಿಹೋದರು. ನಮ್ಮಂತಹ ಸಾಮಾನ್ಯ ಜನರು ಎಷ್ಟು ಬಾರಿ ಕೆಲಸ ಬಿಟ್ಟು ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಹೋಗಬೇಕು ಎಂದು ಶ್ರೀಕಾಂತಿ ದತ್ತಾ ಪ್ರಶ್ನಿಸಿದ್ದಾರೆ.