ಡೆಹ್ರಾಡೂನ್, ನ 19 (DaijiworldNews/HR): ಟಾಟಾ ಸುಮೊ ಕಂದಕಕ್ಕೆ ಉರಳಿ ಬಿದ್ದು ಇಬ್ಬರು ಮಹಿಳೆಯರು ಸೇರಿದಂತೆ 12 ಮಂದಿ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಪ್ರದೇಶದ ಉರ್ಗಾಂ ಎಂಬಲ್ಲಿ ನಡೆದಿದೆ.
ಘಟನೆ ತಿಳಿದ ತಕ್ಷಣ ಎಸ್ಡಿಆರ್ಎಫ್ ರಕ್ಷಣಾ ಕಾರ್ಯಚರಣೆ ನಡೆಸಿದ್ದು, ಪ್ರಯಾಣಿಕರು ಜೋಶಿಮಠ್ನಿಂದ ಪಲ್ಲಾ ಜಖೋಲ್ ಗ್ರಾಮಕ್ಕೆ ತೆರಳುತ್ತಿದ್ದರು ಎಂದು ಚಮೋಲಿ ಎಸ್ಪಿ ಪ್ರಮೇಂದ್ರ ದೊಭಾಲ್ ಹೇಳಿದ್ದಾರೆ.
ಇನ್ನು 12 ಮೃತದೇಹಗಳನ್ನು ಎಸ್ಡಿಆರ್ಎಫ್ ಪತ್ತೆ ಮಾಡಿದ್ದು, ಈ ಕಂದಕ ಸುಮಾರು 300 ಮೀಟರ್ಗಳಷ್ಟು ಆಳ ಇದೆ. ವಾಹನದ ಅವಶೇಷಗಳನ್ನು ಮೇಲೆತ್ತುವುದು ಕಷ್ಟ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮೃತಪಟ್ಟ ಪ್ರಯಾಣಿಕರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.