ಕೊಟ್ಟಿಗೆಹಾರ, ನ 18 (DaijiworldNews/DB): ಕಿಡಿಗೇಡಿಗಳು ಹಂದಿಗಳ ಕಳೇಬರವನ್ನು ರಸ್ತೆ ಬದಿಯಲ್ಲಿ ಎಸೆದು ಹೋದ ಘಟನೆ ಚಾರ್ಮಾಡಿಘಾಟ್ನ ಮಲಯಮಾರುತ ಸಮೀಪದಲ್ಲಿ ನಡೆದಿದೆ. ಪರಿಣಾಮ ಅತಿಯಾದ ವಾಸನೆಯಿಂದ ಮೂಗುಮುಚ್ಚಿಕೊಂಡೇ ಸಂಚರಿಸಬೇಕಾದ ಪ್ರಯಾಸ ಪ್ರಯಾಣಿಕರಿಗೆ ಎದುರಾಗಿದೆ.
ಸುಮಾರು ನಾಲ್ಕಕ್ಕೂ ಹೆಚ್ಚು ದೊಡ್ಡ ಗಾತ್ರದ ಹಂದಿಗಳ ಕಳೇಬರವನ್ನು ಕಿಡಿಗೇಡಿಗಳು ರಸ್ತೆ ಬದಿಯಲ್ಲಿ ಎಸೆದಿದ್ದಾರೆ. ಈ ಕಳೇಬರ ಕೊಳೆತು ನಾರುತ್ತಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ. ಅತಿಯಾದ ವಾಸನೆಯಿಂದಾಗಿ ಮೂಗುಮುಚ್ಚಿಕೊಂಡೇ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.
ಇನ್ನು ಪಕ್ಕದಲ್ಲೇ ತೊರೆಯೊಂದು ಹರಿಯುತ್ತಿದ್ದು, ಹಂದಿಗಳ ಕಳೇಬರ ಕೊಳೆತು ತೊರೆ ಸೇರುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿಯೂ ಎದುರಾಗಿದೆ. ವಾಹನದಲ್ಲಿ ಹಂದಿಗಳನ್ನು ಸಾಗಾಟ ಮಾಡುವ ವೇಳೆ ಸತ್ತ ಹಂದಿಗಳನ್ನು ಇಲ್ಲೇ ಎಸೆದು ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಹಂದಿಗಳ ಕಳೇಬರ ಎಸೆದು ಹೋಗಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮತ್ತು ವಾಹನ ಸವಾರರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.