ನವದೆಹಲಿ, ನ 18 (DaijiworldNews/HR): ಭಯೋತ್ಪಾದಕ ಸಂಘಟನೆಗಳ ವಿರುದ್ದ ಒಟ್ಟಾಗಿ ಹೋರಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ದರೆ ನೀಡಿದ್ದಾರೆ.
ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ನಿಗ್ರಹಿಸುವ ಕುರಿತ ಮೂರನೇ ಸಚಿವರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವವರೆಗೆ ನಾವು ಶ್ರಮಿಸಬೇಕು. ಈ ಸಮ್ಮೇಳನವು ಭಾರತದಲ್ಲಿ ನಡೆಯುತ್ತಿರುವುದು ಮಹತ್ವದ್ದಾಗಿದೆ. ಜಗತ್ತು ಅದನ್ನು ಗಂಭೀರವಾಗಿ ಪರಿಗಣಿಸುವ ಮೊದಲೇ ನಮ್ಮ ದೇಶವು ಭಯೋತ್ಪಾದನೆಯ ಭಯಾನಕತೆಯನ್ನು ಎದುರಿಸಿದೆ ಎಂದರು.
ಇನ್ನು ದಶಕಗಳಿಂದ ಭಯೋತ್ಪಾದನೆಯು ವಿವಿಧ ರೂಪಗಳಲ್ಲಿ ಭಾರತವನ್ನು ನೋಯಿಸಲು ಪ್ರಯತ್ನಿಸಿತ್ತು. ಆದರೆ ನಾವು ಧೈರ್ಯದಿಂದ ಭಯೋತ್ಪಾದನೆಯ ವಿರುದ್ಧ ಹೋರಾಡಿದ್ದೇವೆ ಎಂದಿದ್ದಾರೆ.