ಛತ್ತೀಸ್ಗಢ, ನ 17 (DaijiworldNews/HR): ನಾಲ್ವರು ವೈದ್ಯರು ಮತ್ತು ಮೂವರು ಪ್ಯಾರಾಮೆಡಿಕಲ್ ಸಿಬ್ಬಂದಿ ನಿರ್ಲಕ್ಷ್ಯದಿಂದ 10 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದ ದುರ್ಗ್ನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ವೈದ್ಯರ ವಿರುದ್ಧ ದೂರು ದಾಖಲಾಗಿದೆ.
ಸಾಂದರ್ಭಿಕ ಚಿತ್ರ
ಶಿವಾಂಶ್ ವರ್ಮಾ ಎಂಬ 10 ತಿಂಗಳ ಮಗುವನ್ನು ಶೀತ ಮತ್ತು ಕೆಮ್ಮಿನ ಚಿಕಿತ್ಸೆಗಾಗಿ ಓಲ್ಡ್ ಭಿಲಾಯಿ ಪ್ರದೇಶದ ಸಿರ್ಸಾ ಗೇಟ್ನಲ್ಲಿರುವ ಸಿದ್ಧಿ ವಿನಾಯಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಘಟನೆ ಸಂಬಂಧ ದೇವಬಲೋಡಾ ಗ್ರಾಮದ ಸ್ಥಳೀಯರಾದ ಮಗುವಿನ ಅಜ್ಜ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ.
ಆರೋಗ್ಯ ಅಧಿಕಾರಿಗಳ ತನಿಖೆಯಲ್ಲಿ ಸಿದ್ಧಿ ವಿನಾಯಕ ಆಸ್ಪತ್ರೆಯ ಡಾ.ಸಮಿತ್ ರಾಜ್ ಪ್ರಸಾದ್, ಡಾ.ದುರ್ಗಾ ಸೋನಿ, ಡಾ.ಹರಿರಾಮ್ ಯದು ಮತ್ತು ಡಾ.ಗಿರೀಶ್ ಸಾಹು ಮತ್ತು ಮೂವರು ಅರೆವೈದ್ಯಕೀಯ ಸಿಬ್ಬಂದಿಗಳಾದ ವಿಭಾ ಸಾಹು, ಆರತಿ ಸಾಹು ಮತ್ತು ನಿರ್ಮಲಾ ಯಾದವ್ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಿಎಸ್ಪಿ ತಿಳಿಸಿದ್ದಾರೆ.
ಘಟನೆಯ ನಂತರ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ವಿರುದ್ಧ ಕ್ರಮದ ಹೊರತಾಗಿ, ಜಿಲ್ಲಾ ಆರೋಗ್ಯ ಪ್ರಾಧಿಕಾರವು ಆಸ್ಪತ್ರೆಯ ನೋಂದಣಿಯನ್ನು ರದ್ದುಗೊಳಿಸಿದೆ ಮತ್ತು ಅದರ ನಿರ್ವಹಣೆಗೆ ರೂ 20,000 ದಂಡವನ್ನು ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.