ಲಖನೌ, ನ 17 (DaijiworldNews/DB): ಪಾಲಕರ ಸಭೆಗೆ ಹೆದರಿ ಬಾಲಕನೊಬ್ಬ ರೈಲು ಹಳಿ ಮೇಲೆ ನಿಂತು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರಪ್ರದೇಶದ ಲಖನೌನಲ್ಲಿ ನಡೆದಿದೆ.
ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಆದಿತ್ಯ ತಿವಾರಿ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ಬಾಲಕ. ಕಲಿಕೆಯಲ್ಲಿ ಮುಂದಿದ್ದರೂ ಪರೀಕ್ಷೆಯೊಂದರಲ್ಲಿ ಕಡಿಮೆ ಅಂಕ ಗಳಿಸಿದ್ದ ಬಾಲಕ ಪಾಲಕರ ಸಭೆ ಕರೆದಾಗ ಆತಂಕಗೊಂಡಿದ್ದ. ಸಭೆಯ ದಿನದಂದು ರೈಲು ಹಳಿ ಮೇಲೆ ನಿಂತಿದ್ದ. ಅದೃಷ್ಟವಶಾತ್ ಬೇರೆಯವರು ನೋಡಿ ಆತನನ್ನು ರಕ್ಷಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಇದಕ್ಕೂ ಮೊದಲು ಆತ ಶಿಕ್ಷಕಿಗೆ ಪತ್ರ ಬರೆದಿದ್ದು, ನಾನು ಮಾಡಿರುವ ತಪ್ಪಿಗೆ ನಿಮ್ಮಲ್ಲಿ ಕ್ಷಮೆ ಕೋರುತ್ತೇನೆ. ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂದು ಪತ್ರದಲ್ಲಿ ಕ್ಷಮೆ ಕೋರಿದ್ದಾನೆ.