ರಾಂಚಿ, ನ 17 (DaijiworldNews/DB): ನನ್ನ ಮೇಲಿನ ಅಕ್ರಮ ಗಣಿಗಾರಿಕೆ ಆರೋಪ ನಿರಾಧಾರ. ವಿಪಕ್ಷಗಳ ಷಡ್ಯಂತ್ರಕ್ಕೆ ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ.
ಗಣಿಗಾರಿಕೆ ಗುತ್ತಿಗೆ ನೀಡಿದ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಇಡಿ ವಿಚಾರಣೆ ಎದುರಿಸುತ್ತಿರುವ ಸಂಬಂಧ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಸರ್ಕಾರವನ್ನು ಅಸ್ಥಿರಗೊಳಿಸಲು ಮಾಡಿದ ಸಂಚಿನ ಭಾಗ ಇದು. ಯಾವುದೇ ಆಧಾರಗಳಿಲ್ಲದೆ ನನ್ನ ಮೇಲೆ ಆರೋಪ ಮಾಡಲಾಗಿದೆ ಎಂದರು.
ಇಡಿಯಿಂದ ಸಮನ್ಸ್ ನೀಡುವುದನ್ನು ನೋಡಿದರೆ ನಾನು ದೇಶ ಬಿಟ್ಟು ಓಡಿ ಹೋಗುತ್ತೇನೆಂದೇ ಭಾವಿಸಬೇಕು. ನಾನು ಸಿಎಂ. ದೇಶ ಬಿಟ್ಟು ಓಡಿ ಹೋಗುವ ವ್ಯಕ್ತಿ ನಾನಲ್ಲ. ತನಿಖೆ ಬಳಿಕ ಏಜೆನ್ಸಿಗಳು ತೀರ್ಮಾನಕ್ಕೆ ಬರಲಿ ಎಂದವರು ತಿಳಿಸಿದರು.