ಮುಂಬೈ,ನ 17 (DaijiworldNews/MS): "ಅಗ್ನಿವೀರ್ ಯೋಜನೆ ಮೂಲಕ ಯುವಕರನ್ನು ಜೀವನಪೂರ್ತಿ ನಿರುದ್ಯೋಗಿಗಳನ್ನಾಗಿ ಮಾಡುವುದು ಪ್ರಧಾನಿ ಮೋದಿ ಸರ್ಕಾರ ಉದ್ದೇಶ" ಎಂದು ಸಂಸದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಹಾರಾಷ್ಟ್ರದ ಮಾಲೆಗಾಂವ್ನಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಜನಸಾಮಾನ್ಯರನ್ನುದ್ದೇಶಿಸಿ ಮಾತನಾಡುವಾಗ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು "ಅಗ್ನಿವೀರ್ ಆಗಿ ಯಾಕೆಂದರೆ 6 ತಿಂಗಳು ತರಬೇತಿ ಪಡೆದು, 4 ವರ್ಷ ಸೇನೆಯಲ್ಲಿ ಕೆಲಸ ಮಾಡಿ, ನಂತರ ಜೀವನಪೂರ್ತಿ ನಿರುದ್ಯೋಗಿಯಾಗು ಎಂದು ಮೋದಿ ಸರ್ಕಾರ ಹೇಳುತ್ತಿದೆ, ಇದು ಯಾವ ರೀತಿಯ ರಾಷ್ಟ್ರೀಯತೆ? ಅಗ್ನಿವೀರ್ ಯೋಜನೆ ಮೂಲಕ ಕೇಂದ್ರ ಯುವಕರ ಭಾವನೆಗಳೊಂದಿಗೆ ಆಟವಾಡುತ್ತಿದೆ". ಎಂದು ಆರೋಪಿಸಿದರು.
ಇನ್ನು ಬೆಲೆ ಏರಿಕೆ ಬಗ್ಗೆಯೂ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು ,ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿನ ಮಟ್ಟಕ್ಕೆ ಏರಿಸಲಾಗಿದೆ. ರೈತರ ಮೂಲಭೂತ ಅವಶ್ಯಕತೆಗಳು ಡೀಸೆಲ್, ಪೆಟ್ರೋಲ್, ಗ್ಯಾಸ್ ಸಿಲಿಂಡರ್. ಆದರೆ, ಪ್ರಸ್ತುತ ಸರ್ಕಾರವು ಈ ವಸ್ತುಗಳ ದರವನ್ನು ಹೆಚ್ಚಿಸಿದೆ' ಎಂದು ರಾಹುಲ್ ಕಿಡಿಕಾರಿದ್ದಾರೆ.