ಕಾರವಾರ, ನ 16 (DaijiworldNews/DB): ಹಿಂದೂ ಕಾರ್ಯಕರ್ತ ಹೊನ್ನಾವರದ ಪರೇಶ್ ಮೇಸ್ತಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರದ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಕೆ ಮಾಡಿರುವ ’ಬಿ’ ರಿಪೋರ್ಟ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪರೇಶ್ ಮೇಸ್ತಾ ತಂದೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ.
ಕಳೆದ ಅಕ್ಟೋಬರ್ 6ರಂದು ಸಿಬಿಐ ತನಿಖಾ ತಂಡವು ಪರೇಶ್ ಮೇಸ್ತಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರದ ನ್ಯಾಯಾಲಯಕ್ಕೆ ʼಬಿʼ ರಿಪೋರ್ಟ್ ಸಲ್ಲಿಸಿತ್ತು.ಆದರೆ ಈ ವರದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪರೇಶ್ ಮೇಸ್ತಾ ತಂದೆ ಕಮಾಲಕ ಮೇಸ್ತಾ ಅವರು ವಕೀಲರ ಮೂಲಕ ಹೊನ್ನಾವರದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಆಗಮಿಸಿ ಆಕ್ಷೇಪಣ ಅರ್ಜಿ ಸಲ್ಲಿಸಿದ್ದು, ಪ್ರಕರಣದ ಕುರಿಉ ಹೆಚ್ಚಿನ ತನಿಖೆಯಾಗಬೇಕು ಎಂದು ಕೋರಿದ್ದಾರೆ.
ಪರೇಶ್ ಮೇಸ್ತಾನದ್ದು ಸಹಜ ಸಾವೇ ಹೊರತು ಕೊಲೆಯಲ್ಲ. ಆರೋಪಿತರನ್ನು ದೋಷಮುಕ್ತರನ್ನಾಗಿಸಬಹುದು ಎಂದು ಸಿಬಿಐ ತನಿಖಾ ತಂಡ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿತ್ತು. ಆದರೆ ಇದನ್ನು ವಿರೋಧಿಸಿದ್ದ ಮಲಾಕರ ಮೇಸ್ತಾ, ಮಗನನ್ನು ಕೊಲೆ ಮಾಡಲಾಗಿದೆ, ಅವನದ್ದು ಸಹಜ ಸಾವಲ್ಲ ಎಂದು ಆಪಾದಿಸಿದ್ದರು.