ಪಶ್ಚಿಮ ಬಂಗಾಳ, ನ 15 (DaijiworldNews/DB): ಕೇಂದ್ರ ಸರ್ಕಾರವು ರಾಜ್ಯದ ಸಾಲ ಮನ್ನಾ ಮಾಡದಿದ್ದರೆ ಜಿಎಸ್ಟಿ ಪಾವತಿಯನ್ನು ನಿಲ್ಲಿಸಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ.
ಬುಡಕಟ್ಟು ಜನಾಂಗದ ಪ್ರಾಬಲ್ಯದ ಜಾರ್ಗ್ರಾಮ್ ಪ್ರದೇಶದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯಗಳ ಸಾಲವನ್ನು ಕೇಂದ್ರ ಮನ್ನಾ ಮಾಡಬೇಕು. ಇಲ್ಲವೇ ಅಧಿಕಾರ ತ್ಯಜಿಸಬೇಕು. ಸಾಲ ಮನ್ನಾ ಮಾಡದೇ ಇದ್ದಲ್ಲಿ ಜಿಎಸ್ಟಿ ಪಾವತಿ ಮಾಡುವುದಿಲ್ಲ ಎಂದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಹಣವನ್ನು ಕೇಂದ್ರ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಹಣಕಾಸು ಬಾಕಿ ತೆರವು ಮಾಡಿ ಎಂದು ನಾವು ಕೇಂದ್ರದೆದುರು ಭಿಕ್ಷೆ ಎತ್ತಬೇಕೇ? ಮುಂದಿನ ದಿನಗಳಲ್ಲಿ ಹಣ ಬಿಡುಗಡೆಗೊಳಿಸದಿದ್ದರೆ ಅಧಿಕಾರದಿಂದಲೇ ನೀವು ಕೆಳಗಿಳಿಯಬೇಕು ಎಂದು ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದರು.