ಕಡೂರು, ನ 15 (DaijiworldNews/HR): ಸಿದ್ದರಾಮಯ್ಯ ಅವರೇ 2013ರಲ್ಲಿ ನೀವು ಸಿಎಂ ಆದಿರಿ. ಜನ ಆಶೀರ್ವಾದ ಮಾಡಿದರು, ಆದರೆ ನೀವು ಕೊಟ್ಟಿದ್ದು ಏನು? ಜನ ಇವರನ್ನು ಆರಿಸಿದ್ದೇ ದೌರ್ಭಾಗ್ಯ ಎಂದು ಸೋಲಿಸಿದರು. ನಿಮ್ಮ ಕಾಲದಲ್ಲಿ ಅನ್ನಕ್ಕೆ ಕನ್ನ ಹಾಕಿದ್ದನ್ನು ಜನ ಮರೆತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಸಿದ್ದುಗೆ ಮನಸ್ಸು ಇಲ್ಲ ಮಾರ್ಗವೂ ಇಲ್ಲ. ಕಡೂರು ನನ್ನ ಹೃದಯಕ್ಕೆ ಹತ್ತಿರವಿದೆ. ಇದು ಬಿಜೆಪಿ ಭದ್ರಕೊಟೆ, ಯಾರೂ ಏನು ಮಾಡಲು ಆಗಲ್ಲ ಎಂದರು.
ಇನ್ನು ನಾನು ಮುಖ್ಯಮಂತ್ರಿ ಆಗಬೇಕೆಂದರೆ ಕಾಂಗ್ರೆಸ್ ಗೆ ಮತ ಹಾಕಿಯೆಂದು ಸಿದ್ದರಾಮಣ್ಣ, ಮೈಸೂರಿನಲ್ಲಿ ಹೇಳಿದ್ದಾರೆ. ಆದರೆ ಜನ ಬೆಂಬಲ ಆಮೇಲೆ, ಮೊದಲು ಡಿಕೆಶಿ ಬೆಂಬಲ ತಗೋಳ್ಳಿ. ನಿಮಗೆ ಅದೇ ಇಲ್ಲ, ಜನ ಬೆಂಬಲ ಹೇಗೆ ಕೇಳ್ತೀಯಪ್ಪಾ ಸಿದ್ದರಾಮಣ್ಣ ಎಂದು ವ್ಯಂಗ್ಯವಾಡಿದ್ದಾರೆ.