ಮೈಸೂರು, ನ 14 (DaijiworldNews/MS): ಗುಂಬಜ್ ಒಡೆದು ಹಾಕ್ತೀನಿ ಅನ್ನೋಕೆ ಪ್ರತಾಪ್ ಸಿಂಹ ಯಾವನು ಎಂದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಮೈಸೂರು ನಿರ್ಮಿಸಿರುವ ಪ್ರಯಾಣಿಕರ ತಂಗುದಾಣ ವಿವಾದಕ್ಕೆ ಗುರಿಯಾದ ಹಿನ್ನಲೆ ಸಂಸದ ಪ್ರತಾಪ್ ಸಿಂಹ ಗುಂಬಜ್ ಮಾದರಿಯಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡುವಂತಿಲ್ಲ. ಒಂದು ವೇಳೆ ನಿರ್ಮಿಸಿದರೆ ಒಡೆದು ಹಾಕುವುದು ನಿಶ್ಚಿತ ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ತಿರುಗೇಟು ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ " ಸಂಸದನಾಗಿ ಕಾಮನ್ಸೆನ್ಸ್ ಬೇಡವೇ? ಅವರು ತಮ್ಮ ಮನೆಯ ಹಣ ಹಾಕಿ ಪ್ರಯಾಣಿಕರ ತಂಗುದಾಣ ಕಟ್ಟಿಸಿದ್ದಾರಾ? ಅಧಿಕಾರಿಗಳು ವಿನ್ಯಾಸ ಕೊಡುವಾಗ ಸಂಸದ ಏನು ಮಾಡುತ್ತಿದ್ದರು? ಈಗ ನಾನೇ ಒಡೆದು ಹಾಕ್ತೀನಿ ಅಂದ್ರೆ ಏನ್ ಅರ್ಥ ಎಂದು ಗರ ಆಗಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಮತ ಕ್ರೂಡೀಕರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ತಂಗುತಾಣ ಹೀಗೆಯೇ ಇರಬೇಕು ಎಂಬ ನಿಯಮ ಎಲ್ಲಿದೆ? ಸರ್ಕಾರಿ ಅಧಿಕಾರಿಗಳು ಮಾಡಿರುವ ಪ್ಲ್ಯಾನ್ ಪ್ರಕಾರ ಪ್ರಯಾಣಿಕರ ತಂಗುದಾಣ ನಿರ್ಮಾಣ ಆಗಿದೆ ಎಂದು ಹೇಳಿದ್ದಾರೆ.