ಮುಂಬೈ, ನ 15 (DaijiworldNews/DB): ಯಾವುದೇ ಓಟ್ಬ್ಯಾಂಕ್ನೊಂದಿಗೆ ಭಾರತ್ ಜೋಡೋ ಯಾತ್ರೆಗೆ ಸಂಪರ್ಕವಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆಯು ರಾಜಕೀಯ ಉದ್ದೇಶ ಹೊಂದಿಲ್ಲ. ಅದಕ್ಕಿಂತ ಆಚೆ ರಾಜಕೀಯ ಪಕ್ಷ ಮತ್ತು ವಿಷಯಗಳನ್ನೊಳಗೊಂಡ, ಜನರ ನಾಡಿಮಿಡಿತ ಅರಿಯುವ ಯಾತ್ರೆ ಇದಾಗಿದೆ. ಒಗ್ಗಟ್ಟನ್ನು ಯಾತ್ರೆ ಬಿಂಬಿಸುತ್ತದೆ. ವೋಟ್ಬ್ಯಾಂಕ್ಗೂ ಯಾತ್ರೆಗೂ ಸಂಪರ್ಕ ಇಲ್ಲ ಎಂದರು.
ಇದು ಪಕ್ಷದೊಂದಿಗೆ ಸಂಬಂಧ ಹೊಂದಿದೆ. ಯಾತ್ರೆಯ ಪರಿಣಾಮ ಏನೆಂಬುದು 2024ರ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಲಿದೆ ಎಂದು ಜೈರಾಮ್ ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು.