ವಾರಾಣಾಸಿ, ನ 14 (DaijiworldNews/HR): ಜ್ಞಾನವಾಪಿ ಮಸೀದಿಯಲ್ಲಿ ಇದೆ ಎನ್ನಲಾದ ಶಿವಲಿಂಗಕ್ಕೆ ಪೂಜೆಗೆ ಅವಕಾಶ ಕೋರಿ ಸಲ್ಲಿಸಲಾಗಿದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ವಾರಾಣಾಸಿ ನ್ಯಾಯಾಲಯವು ತನ್ನ ತೀರ್ಪನ್ನು ನವೆಂಬರ್ 17ಕ್ಕೆ ಮತ್ತೆ ಮುಂದೂಡಿದೆ.
ಅಕ್ಟೋಬರ್ 27ರಂದು ನ್ಯಾಯಾಲಯವು ವಿಚಾರಣೆಯನ್ನು ಪೂರ್ತಿಗೊಳಿಸಿ, ನವೆಂಬರ್ 8ಕ್ಕೆ ತೀರ್ಪು ನೀಡುವುದಾಗಿ ಹೇಳಿತ್ತು. ಆದರೆ, ನವೆಂಬರ್ 8ರಂದು ಸಂಬಂಧಿಸಿದ ನ್ಯಾಯಾಧೀಶರು ಗೈರು ಹಾಜರಾದ್ದರಿಂದ ತೀರ್ಪು ಪ್ರಕಟ ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಸಿನಿಯರ್ ಡಿವಿಷನ್ ಸಿವಿಲ್ ಜಡ್ಜ್ ಮಹೇಂದ್ರ ಪಾಂಡೆ ಅವರು ನವೆಂಬರ್ 17ಕ್ಕೆ ತೀರ್ಪು ಮುಂದೂಡಿದ್ದಾರೆ.
ಇನ್ನು ಈ ಹಿಂದಿನ ವಿಚಾರಣೆ ವೇಳೆ ಮಸೀದಿಯೊಳಗೆ ಇದೆ ಎನ್ನಲಾದ ಶಿವಲಿಂಗದ ವೈಜ್ಞಾನಿಕ(ಕಾರ್ಬನ್ ಡೇಟಿಂಗ್) ಪರೀಕ್ಷೆಗೆ ನ್ಯಾಯಾಲಯವು ನಿರಾಕರಿಸಿತ್ತು.