ಸಂಭಾಲ್, ನ 14 (DaijiworldNews/HR): ಬಿಜೆಪಿಯವರು ಪ್ರತಿ ಮಸೀದಿಯಲ್ಲಿ ದೇವಸ್ಥಾನವನ್ನು ನೋಡುತ್ತಾರೆ, ಮುಸ್ಲಿಮರು ದುರ್ಬಲರಲ್ಲ, ತಮ್ಮ ಮಸೀದಿಗಳನ್ನು ದೇವಾಲಯಗಳಾಗಿ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಲೋಕಸಭಾ ಸದಸ್ಯ ಹಾಗೂ ಸಮಾಜವಾದಿ ಪಕ್ಷದ ನಾಯಕ ಶಫೀಕರ್ ರಹಮಾನ್ ಬಾರ್ಕ್ ಅವರು ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಲಾಭ ಪಡೆಯಲು ಏಕರೂಪ ನಾಗರಿಕ ಸಂಹಿತೆಯಂತಹ ವಿಭಜಕ ವಿಷಯಗಳನ್ನು ಎತ್ತುತ್ತಿದ್ದಾರೆ ಎಂದರು.
ಇನ್ನು ಬಿಜೆಪಿವರರು ಮಸೀದಿಯನ್ನು ಮಂದಿರ ಎಂದು ಕರೆಯುತ್ತಾರೆ. ದ್ವೇಷದ ಮತ್ತು ಹೃದಯಗಳನ್ನು ಒಗ್ಗೂಡಿಸದ ಏಕರೂಪ ನಾಗರಿಕ ಸಂಹಿತೆಯಂತಹ ಸಮಸ್ಯೆಗಳನ್ನು ಎತ್ತುತ್ತಾರೆ. 2024 ರ ಚುನಾವಣೆಗಳು ಇರುವುದರಿಂದ, ಎಲ್ಲಾ ಹಿಂದೂಗಳು ಅದರೊಂದಿಗೆ ಇರಲು ಹಿಂದೂ-ಮುಸ್ಲಿಂ ದ್ವೇಷದ ಹೆಸರಿನಲ್ಲಿ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ಹೇಳಿದರು.