ಇಂದೋರ್, ನ 13 (DaijiworldNews/DB): ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಪಟ್ಟಿದ್ದ ವ್ಯಕ್ತಿಯೊಬ್ಬ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಮತ್ತೊಮ್ಮೆ ಬಂಧಿಸಲ್ಪಟ್ಟಿದ್ದಾನೆ. ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಕಾವಲುಗಾರನ ಪುತ್ರಿ 9 ವರ್ಷದ ಬಾಲಕಿ ಸಣ್ಣ ಗುಡಿಸಲಿನಲ್ಲಿ ಪೋಷಕರೊಂದಿಗೆ ಮಲಗಿದ್ದಾಗ 32 ವರ್ಷದ ಆರೋಪಿಯು ಬಾಲಕಿಯನ್ನು ಮಲಗಿದ್ದಲ್ಲಿಂದಲೇ ಅಪಹರಿಸಿ ನಿರ್ಮಾಣ ಸ್ಥಳದ ಇನ್ನೊಂದು ಬದಿಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಈ ವೇಳೆ ಹಲ್ಲೆ ನಡೆಸಿದ್ದು, ಸಂತ್ರಸ್ತ ಬಾಲಕಿ ಕೂಗಿಕೊಂಡಿದ್ದಾಳೆ. ಅಳು ಕೇಳಿದ ಹೆತ್ತವರು ಓಡಿ ಹೋಗಿ ಆಕೆಯ ರಕ್ಷಿಸಿ ಆಪತ್ರೆಗೆ ಸಾಗಿಸಿದರು. ಆದರೆ ಬಾಲಕಿಗೆ ತೀವ್ರ ರಕ್ತಸ್ರಾವವಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಇಂದೋರ್ನ ಉಪ ಪೊಲೀಸ್ ಆಯುಕ್ತ ಅಮಿತ್ ತೋಲಾನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇಂದೋರ್ ಜಿಲ್ಲೆಯ ಅಹಿರ್ಖೇಡಿ ಗ್ರಾಮದ ನಿವಾಸಿಯಾಗಿರುವ ಆರೋಪಿ ಕೃತ್ಯವನ್ನು ಪೊಲೀಸರೆದುರು ಒಪ್ಪಿಕೊಂಡಿದ್ದಾನೆ. ಈತ ಅತ್ಯಾಚಾರ ಪ್ರಕರಣದಲ್ಲಿ ಈ ಹುಂದೆಯೂ ಶಿಕ್ಷೆ ಅನುಭವಿಸಿದ್ದ. ಆತ ಮಾದಕ ವ್ಯಸನಿಯಾಗಿದ್ದು, ಮಾನಸಿಕ ಅಸ್ಥಿರತೆ ಹೊಂದಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾನೆ.