ಅಲ್ಮೋರ್, ನ 13 (DaijiworldNews/HR): ಬಗೇಶ್ವರದ ಪೌಸಾರಿ ಗ್ರಾಮದಲ್ಲಿ ಕೆಂಪು ಇರುವೆ ಕಚ್ಚಿದ ಎರಡು ಗಂಟೆಯೊಳಗೆ ಮೂರು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.
ಭೂಪೇಶ್ ರಾಮ್ ಎಂಬವರ ಮಕ್ಕಳಾದ ಪ್ರಿಯಾಂಶು(5) ಮತ್ತು ವರ್ಷದ ಸಾಗರ್(3) ಮೈದಾನದಲ್ಲಿ ಆಡುತ್ತಿದ್ದಾಗ ಕೆಂಪು ಇರುವೆ ಇಬ್ಬರಿಗೂ ಕಚ್ಚಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇನ್ನು ಸಾಗರ್ ಮಾರ್ಗದ ಮಧ್ಯದಲ್ಲಿ ಮೃತಪಟ್ಟರೆ, ಚಿಕಿತ್ಸೆಯಿಂದ ಚೇತರಿಸಿಕೊಂಡ ಪ್ರಿಯಾಂಶುವನ್ನು ಮರುದಿನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.