ವಿಶಾಖಪಟ್ಟಣಂ, ನ 12 (DaijiworldNews/DB): ಭಾರತವು ವಿಶ್ವದ ಆಕಾಂಕ್ಷೆಗಳಿಗೆ ಕೇಂದ್ರ ಬಿಂದುವಾಗಿದೆ. ವಿದೇಶೀ ಹೂಡಿಕೆಗಳನ್ನು ಆಕರ್ಷಿಸಲು ದೇಶ ಪೂರಕ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಹಲವು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಶನಿವಾರ ಮಾತನಾಡಿದ ಅವರು, ಮೂಲಭೂತ ಸೌಕರ್ಯಗಳ ಅಭಿವೃದ್ದಿ ವೇಗಕ್ಕೆ ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆ ಕಾರಣವಾಗಿದೆ. ಅಲ್ಲದೆ ಈ ಯೋಜನೆಯಿಂದಾಗಿ ವೆಚ್ಚವೂ ಕಡಿಮೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಒಎನ್ಜಿಸಿಯ 2,917 ಕೋಟಿ ರೂ.ಗಳ ಯು-ಫೀಲ್ಡ್ ಆನ್ಣೋರ್ ಡೀಪ್ ವಾಟರ್ ಬ್ಲಾಕ್ ಯೋಜನೆ ಉದ್ಘಾಟಿಸಿದರು. ಆಂಧ್ರ ವಿಶ್ವವಿದ್ಯಾನಿಲಯ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ 15,233 ಕೋಟಿ ರೂ. ಮೌಲ್ಯದ ಒಂಭತ್ತು ಯೋಜನೆಗಳಿಗೆ ವರ್ಚುವಲ್ ಮೂಲಕ ಪ್ರಧಾನಿ ಚಾಲನೆ ನೀಡಿ ಫಲಕ ಅನಾವರಣಗೊಳಿಸಿದರು. ಶ್ರೀಕಾಕುಳಂ-ಗಜಪತಿ ಕಾರಿಡಾರ್ನ ಭಾಗವಾಗಿ 211 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಎನ್ಎಚ್-326ಎ ನ ಪಥಪಟ್ಟಣಂ ವಿಭಾಗಕ್ಕೆ 39 ಕಿಮೀ ನರಸನ್ನಪೇಟವನ್ನು ಮೋದಿ ಸಮರ್ಪಿಸಿದರು. 3,778 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಎನ್ಎಚ್-130 ಸಿಡಿಯ ರಾಯಪುರ-ವಿಶಾಖಪಟ್ಟಣಂ ಎಕನಾಮಿಕ್ ಕಾರಿಡಾರ್ನ ಆರು ಪಥದ 100-ಕಿಮೀ ಪ್ರವೇಶ-ನಿಯಂತ್ರಿತ ಗ್ರೀನ್ಫೀಲ್ಡ್ನ ಆಂಧ್ರ ಪ್ರದೇಶ ವಿಭಾಗಕ್ಕೆ ಶಂಕುಸ್ಥಾಪನೆ ಸೇರಿದಂತೆ ಒಟ್ಟು 15,233 ಕೋಟಿ ರೂ. ಮೌಲ್ಯದ ಮೂಲ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.