ಮುಂಬೈ, ನ 12 (DaijiworldNews/DB): ಶಿವಸೇನೆ ನಾಯಕ ಉದ್ದವ್ ಠಾಕ್ರೆ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಸಂಸದ ಗಜಾನನ ಕೀರ್ತಿಕರ್ ಅವರು ಇದೀಗ ಠಾಕ್ರೆ ಪಾಳಯ ಬಿಟ್ಟು ಮುಖ್ಯಮಂತ್ರಿ ಏಕನಾಥ ಶಿಂಧೆ ಬಣಕ್ಕೆ ಸೇರ್ಪಡೆಯಾಗಿದ್ದಾರೆ.
ಸದ್ಯ ಶಿವಸೇನೆಯ 18 ಸಂಸದರ ಪೈಕಿ ಕೀರ್ತಿಕರ್ ಸೇರಿ 13 ಮಂದಿ ಸಂಸದರು ಶಿಂಧೆ ಬಣಕ್ಕೆ ಸೇರ್ಪಡೆಯಾಗಿದ್ದಾರೆ. 56 ಮಂದಿ ಶಾಸಕರ ಪೈಕಿ 40 ಮಂದಿ ಶಾಸಕರ ಬೆಂಬಲವೂ ಶಿಂಧೆ ಅವರಿಗಿದೆ. ಈ ನಡುವೆ ಶಿಂಧೆ ಅವರ ಕೆಲಸಗಳನ್ನು ಉದ್ದವ್ ಠಾಕ್ರೆ ಅರ್ಥೈಸಿಕೊಳ್ಳಬೇಕು ಎಂದು ಗಜಾನನ ಕೀರ್ತಿಕರ್ ಈ ಹಿಂದೆ ಹೇಳಿದ್ದರು.
ಕೀರ್ತಿಕರು ಅವರು ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಹೆಚ್ಚು ಜನಪ್ರಿಯತೆ ಪಡೆದವರಾಗಿದ್ದಾರೆ. ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಗಿದೆ. ಅವರ ಸಾಮಾಜಿಕ ಮತ್ತು ರಾಜಕೀಯ ಪ್ರಗತಿಗೆ ನಾವು ಶುಭ ಕೋರುವುದಾಗಿ ಶಿಂಧೆ ಟ್ವೀಟ್ ಮಾಡಿದ್ದಾರೆ.
ಮುಂಬೈ, ನ 12 (DaijiworldNews/DB): ಶಿವಸೇನೆ ನಾಯಕ ಉದ್ದವ್ ಠಾಕ್ರೆ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಸಂಸದ ಗಜಾನನ ಕೀರ್ತಿಕರ್ ಅವರು ಇದೀಗ ಠಾಕ್ರೆ ಪಾಳಯ ಬಿಟ್ಟು ಮುಖ್ಯಮಂತ್ರಿ ಏಕನಾಥ ಶಿಂಧೆ ಬಣಕ್ಕೆ ಸೇರ್ಪಡೆಯಾಗಿದ್ದಾರೆ.
ಸದ್ಯ ಶಿವಸೇನೆಯ 18 ಸಂಸದರ ಪೈಕಿ ಕೀರ್ತಿಕರ್ ಸೇರಿ 13 ಮಂದಿ ಸಂಸದರು ಶಿಂಧೆ ಬಣಕ್ಕೆ ಸೇರ್ಪಡೆಯಾಗಿದ್ದಾರೆ. 56 ಮಂದಿ ಶಾಸಕರ ಪೈಕಿ 40 ಮಂದಿ ಶಾಸಕರ ಬೆಂಬಲವೂ ಶಿಂಧೆ ಅವರಿಗಿದೆ. ಈ ನಡುವೆ ಶಿಂಧೆ ಅವರ ಕೆಲಸಗಳನ್ನು ಉದ್ದವ್ ಠಾಕ್ರೆ ಅರ್ಥೈಸಿಕೊಳ್ಳಬೇಕು ಎಂದು ಗಜಾನನ ಕೀರ್ತಿಕರ್ ಈ ಹಿಂದೆ ಹೇಳಿದ್ದರು.
ಕೀರ್ತಿಕರು ಅವರು ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಹೆಚ್ಚು ಜನಪ್ರಿಯತೆ ಪಡೆದವರಾಗಿದ್ದಾರೆ. ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಗಿದೆ. ಅವರ ಸಾಮಾಜಿಕ ಮತ್ತು ರಾಜಕೀಯ ಪ್ರಗತಿಗೆ ನಾವು ಶುಭ ಕೋರುವುದಾಗಿ ಶಿಂಧೆ ಟ್ವೀಟ್ ಮಾಡಿದ್ದಾರೆ.