ನವದೆಹಲಿ, ನ 11 (DaijiworldNews/HR): ಟಿವಿ ಚಾನೆಲ್ಗಳಲ್ಲಿ ಪ್ರತಿದಿನವೂ ಮೂವತ್ತು ನಿಮಿಷಗಳ ಕಾಲ ರಾಷ್ಟ್ರೀಯ ಮತ್ತು ಸಾಮಾಜಿಕ ಹಿತಾಸಕ್ತಿಯ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಭಕ್ತಿಯ ಅಂಶಕ್ಕೆ ಹೆಚ್ಚಿನ ಉತ್ತೇಜನ ನೀಡುವಂಥ ಹೊಸ ಚಾನೆಲ್ಗಳ ಸ್ಥಾಪನೆಗೆ ಅವಕಾಶ ನೀಡಲಾಗಿದ್ದು, ಅವುಗಳ ಸಿಗ್ನಲ್ ಅಪ್ಲಿಂಕ್ ಮತ್ತು ನೇರ ಪ್ರಸಾರಕ್ಕೆ ಉಚಿತ ಅವಕಾಶ ಕಲ್ಪಿಸಿಕೊಡಲಾಗಿದೆ.
ಇನ್ನು ಸಾಮಾಜಿಕ ಹಿತಾಸಕ್ತಿಯ ವ್ಯಾಪ್ತಿಗೆ ಶಿಕ್ಷಣ, ಸಾಕ್ಷರತೆಯ ಬಗ್ಗೆ ಮಾಹಿತಿ ನೀಡುವ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇರಿದಂತೆ ಹಲವು ಅಂಶಗಳನ್ನು ಹೆಸರಿಸಲಾಗಿದ್ದು, ಇದರ ಜತೆಗೆ ನೇರ ಪ್ರಸಾರಕ್ಕೆ ಪೂರ್ವಾನುಮತಿ ಪಡೆಯಬೇಕಾಗಿಲ್ಲ ಎಂದು ಸೂಚಿಸಿದೆ.
ದೇಶದಿಂದ 30 ಚಾನೆಲ್ಗಳಿಗೆ ಮಾತ್ರ ಅಪ್ಲಿಂಕ್ ಸೌಲಭ್ಯ ಹೊಂದಿದ್ದು, ಉಳಿದ 897 ಚಾನೆಲ್ಗಳು ಇತರ ದೇಶಗಳಿಂದ ಕಾರ್ಯಕ್ರಮ ಅಪ್ಲಿಂಕ್ ಮಾಡುತ್ತಿವೆ ಎನ್ನಲಾಗಿದೆ.