ಪಟ್ಟಣಂತಿಟ್ಟ, ನ 10 (DaijiworldNews/DB): Cಬರಿಮಲೆ ಅಯ್ಯಪ್ಪ ದೇವಸ್ಥಾನದ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶ ಡ್ರಗ್ಸ್ ಮತ್ತು ಮದ್ಯ ಮುಕ್ತ ಪ್ರದೇಶ ಎಂದು ಕೇರಳ ಸರ್ಕಾರ ಘೋಷಿಸಿದೆ.
Cಬರಿಮಲೆ ಯಾತ್ರೆಗೆ ಕೆಲವೇ ದಿನಗಳು ಬಾಕಿ ಇರುವ ವೇಳೆಗೆ ಸರ್ಕಾರದಿಂದ ಈ ಘೋಷಣೆ ಹೊರ ಬಿದ್ದಿದ್ದು, ದೇವಳದ ಆವರಣ ಮತ್ತು ಸುತ್ತಮುತ್ತಲಿನ ಆವರಣದಲ್ಲಿ ಡ್ರಗ್ಸ್ ಮತ್ತು ಮದ್ಯ ಸೇವನೆ ನಿಷಿದ್ದ. ದೇವಳ ಆವರಣ, ಪಂಪ, ತ್ರಿವೇಣಿ, ಮರಕೂಟಂ, ಶಬರಿ ಪೀಠ ಮತ್ತು ಸುತ್ತಮುತ್ತಲಿನ ಕೆಲ ಗ್ರಾಮಗಳಿಗೂ ಇದು ಅನ್ವಯವಾಗುತ್ತದೆ ಎಂದು ತಿಳಿಸಿದೆ.
ನ.17ರಿಂದ ಪ್ರಾರಂಭವಾಗಿ ಜ.15ರವರೆಗೆ ಶಬರಿಮಲೆ ಯಾತ್ರೆ, ವಾರ್ಷಿಕ ದರ್ಶನ ನಡೆಯುತ್ತದೆ. ಇದೇ ವೇಳೆ ಸರ್ಕಾರ ಈ ಮಹತ್ವದ ಘೋಷಣೆ ಮಾಡಿದೆ. ಅಲ್ಲದೆ, ನವೆಂಬರ್ 14ರಿಂದ ಜನವರಿ 22ರವರೆಗೆ ಮದ್ಯ, ಡ್ರಗ್ಸ್, ತಂಬಾಕು ಉತ್ಪನ್ನಗಳ ಬಳಕೆ ಮತ್ತು ಮಾರಾಟವನ್ನು ಕೂಡಾ ಈ ಪ್ರದೇಶದಲ್ಲಿ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.
ಇನ್ನು ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಈ ಬಗ್ಗೆ ಗಮನ ನೀಡಬೇಕು. ಸರ್ಕಾರದ ಆದೇಶ ಮೀರಿ ನಡೆದುಕೊಳ್ಳುವಂತಿಲ್ಲ. ಪೊಲೀಸ್, ಅಬಕಾರಿ, ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿ ಆದೇಶದ ಕಟ್ಟುನಿಟ್ಟಿನ ಪಾಲನೆಗೆ ನಿಗಾ ವಹಿಸಲಿದ್ದಾರೆ ಎಂದು ತಿಳಿಸಿದೆ.