ಪಶ್ಚಿಮ ಬಂಗಾಳ, ನ 10 (DaijiworldNews/HR): ದನಗಳ ತಲೆಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಬಾಂಗ್ಲಾದೇಶದ ಇಬ್ಬರನ್ನು ಬಿಎಸ್ಎಫ್ ಸಿಬ್ಬಂಧಿಗಳು ಗುಂಡಿಕ್ಕಿ ಹೊಡೆದುರುಳಿಸಿರುವ ಘಟನೆ ಪಶ್ಚಿಮ ಬಂಗಾಳದ ಕೂಚ್ಬೆಹಾರ್ನ ಕೈಮಾರಿಯಲ್ಲಿ ನಡೆದಿದೆ.
ಭಾರತ-ಬಾಂಗ್ಲಾದೇಶ ಅಂತರಾಷ್ಟ್ರೀಯ ಗಡಿಯಲ್ಲಿ ನಿಯೋಜಿಸಲಾದ ಬಿಎಸ್ಎಫ್ ಪಡೆಗಳು ಗಡಿ ಬೇಲಿಗಳ ಬಾಂಗ್ಲಾದೇಶದ ಭಾಗದಲ್ಲಿ 15-20 ದುಷ್ಕರ್ಮಿಗಳ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ್ದು, ಅವರು ದನಗಳ ತಲೆಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು.
ಇನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದವರನ್ನು ಹಿಂತಿರುಗುವಂತೆ ಬಿಎಸ್ಎಫ್ ಸೂಚನೆ ನೀಡಿದರೂ ತಮ್ಮ ಕೃತ್ಯವನ್ನು ಮುಂದುವರೆಸಿದರು. ಈ ವೇಳೆ ಕಳ್ಳಸಾಗಾಣಿಕೆದಾರರು ಬಿಎಸ್ಎಫ್ ಪಡೆಗಳ ಭಾರೀ ಕಲ್ಲು ತೂರಾಟ ನಡೆಸಿದಾಗ ಗುಂಡು ಹಾರಿಸುವ ಮೂಲಕ ಬಿಎಸ್ಎಫ್ ಪಡೆಗಳು ಇಬ್ಬರು ಬಾಂಗ್ಲಾದೇಶಿಗರನ್ನು ಹೊಡೆದುಉಳಿಸಿದೆ.