ಹರಿಯಾಣ, ನ 09 (DaijiworldNews/DB): ಎಲ್ಲಾ ಕಾಯಿಲೆಗಳಿಗೂ ಬೊಜ್ಜು ಮೂಲ ಕಾರಣ ಎಂದು ಅಭಿಪ್ರಾಯಿಸಿ 153 ಕೆಜಿ ತೂಕದ ಅನಾರೋಗ್ಯ ಪೀಡಿತ ವ್ಯಕ್ತಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಬೊಜ್ಜು ಒಂದು ಲಕ್ಷಣ ಮಾತ್ರವಲ್ಲ. ಹಲವು ರೋಗಗಳಿಗೆ ಮೂಲ ಕಾರಣ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಎಸ್.ಗಿಲ್ ಅವರಿದ್ದ ಪೀಠ ವ್ಯಕ್ತಿಗೆ ಜಾಮೀನು ಮಂಜೂರು ಮಾಡಿತು.
ಸೆಕ್ಷನ್ 45 ಪಿಎಂಎಲ್ಎಯಲ್ಲಿ ಅರ್ಜಿದಾರರು ನಮೂದಿಸಿರುವ ಅನಾರೋಗ್ಯ ಹೊರತುಪಡಿಸಿ ಜಾಮೀನು ಪಡೆಯಲು ಅವರು ಅರ್ಹರಾಗಿರುತ್ತಾರೆ ಎಂದು ಇದೇ ವೇಳೆ ನ್ಯಾಯಾಲಯ ತಿಳಿಸಿತು.