ಗುಜರಾತ್, ನ 08 (DaijiworldNews/HR): ಗುಜರಾತ್ನ ಮೊರ್ಬಿ ಸೇತುವೆ ದುರಂತ ಪ್ರಕರಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಯಾರೂ ರಾಜೀನಾಮೆ ನೀಡಿಲ್ಲ, ಕ್ಷಮೆ ಕೇಳಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಗುಜರಾತನ್ನು ದೆಹಲಿಯಿಂದ ಆಳಲಾಗುತ್ತಿದೆಯೇ ಹೊರತು ಇಲ್ಲಿನ ಮುಖ್ಯಮಂತ್ರಿಯಿಂದಲ್ಲ ಎಂದಿದ್ದಾರೆ.
ಇನ್ನು ಮೊರ್ಬಿ ಸೇತುವೆ ಕುಸಿತ ಗುಜರಾತ್ ಹೆಸರಿಗೆ ಧಕ್ಕೆ ತಂದಿದ್ದು, ದುರಂತದ ಬಗ್ಗೆ ಸರ್ಕಾರದ ಪರವಾಗಿ ಯಾರೂ ಕ್ಷಮೆ ಯಾಚಿಸಿಲ್ಲ ಅಥವಾ ಘಟನೆಯ ಹೊಣೆ ಹೊತ್ತು ಯಾರೂ ರಾಜೀನಾಮೆ ನೀಡಿಲ್ಲ ಎಂದಿದ್ದಾರೆ.