ನವದೆಹಲಿ, ನ 08 (DaijiworldNews/HR): ಜ್ಞಾನವ್ಯಾಪಿ ಮಸೀದಿ ಆವರಣದಲ್ಲಿ ದೊರೆತ ಶಿವಲಿಂಗಕ್ಕೆ ಪೂಜೆ ಸಲ್ಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿರುವ ವಾರಣಾಸಿಯ ತ್ವರಿತ ನ್ಯಾಯಾಲಯವು ನವೆಂಬರ್ 14 ಕ್ಕೆ ಮುಂದೂಡಿದೆ.
ಸ್ವಯಂಭು ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರರ ಪ್ರಾರ್ಥನೆಯನ್ನು ತಕ್ಷಣವೇ ಪ್ರಾರಂಭಿಸಲು ಅನುಮತಿ ನೀಡುವುದು, ಇಡೀ ಜ್ಞಾನವಾಪಿ ಸಂಕೀರ್ಣವನ್ನು ಹಿಂದೂಗಳಿಗೆ ಹಸ್ತಾಂತರಿಸುವುದು ಮತ್ತು ಜ್ಞಾನವಾಪಿ ಸಂಕೀರ್ಣದ ಆವರಣದೊಳಗೆ ಮುಸ್ಲಿಮರ ಪ್ರವೇಶವನ್ನು ನಿಷೇಧಿಸುವುದು ಸೇರಿದಂತೆ ವಾದಿಯ ಮೂರು ಪ್ರಮುಖ ಬೇಡಿಕೆಗಳ ಅರ್ಜಿಯನ್ನು ಇಂದು ವಿಚಾರಣೆ ನಡೆಸಲಾಗಿತ್ತು.
ಇನ್ನು ನ್ಯಾಯಾಧೀಶರು ರಜೆಯ ಮೇಲಿದ್ದ ಕಾರಣ ಇಂದು ಬರಬೇಕಿದ್ದ ಆದೇಶವು ಬರಲು ಸಾಧ್ಯವಾಗಲಿಲ್ಲ. ಮುಂದಿನ ದಿನಾಂಕ ನವೆಂಬರ್ 14. ಆ ದಿನ ಆದೇಶ ಬರಲಿದೆ ಹಿಂದೂ ಪರ ವಕೀಲ ಅನುಪಮ್ ದ್ವಿವೇದಿ ಹೇಳಿದ್ದಾರೆ.