ನವದೆಹಲಿ, ನ 07 (DaijiworldNews/HR): ದೆಹಲಿಯಲ್ಲಿ ವಾಯು ಗುಣಮಟ್ಟ ಸುಧಾರಣೆಗೊಂಡಿದ್ದು, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ನವೆಂಬರ್ 9ರಿಂದ ಪುನರಾರಂಭಿಸಲಾಗುವುದು ಎಂದು ಪರಿಸರ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಟ್ರಕ್ಗಳಿಗೆ ದೆಹಲಿ ಪ್ರವೇಶಿಸದಂತೆ ಹೇರಲಾಗಿದ್ದ ನಿಷೇದ ಮತ್ತು ವರ್ಕ್ ಫ್ರಂ ಹೋಂ ಸೂಚನೆಯನ್ನು ಹಿಂಪಡೆಯಲಾಗಿದ್ದು, ಕಚೇರಿಗಳು ಪೂರ್ಣ ಸಾಮರ್ಥ್ಯದೊಂದಿಗೆ ಸೋವಾರದಿಂದಲೇ ಕೆಲಸ ಆರಂಭಿಸಲಿವೆ ಎಂದರು.
ಇನ್ನು ಹೆದ್ದಾರಿ, ರಸ್ತೆ, ಮೇಲ್ಸೇತುವೆಗಳು, ತೂಗು ಸೇತುವೆ, ಪೈಪ್ಲೈನ್ ಮತ್ತು ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಕಾಮಗಾರಿಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ಕೂಡ ತೆರವುಗೊಳಿಸಲಾಗಿದೆ ಎಂದಿದ್ದಾರೆ.
ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಟ್ರಕ್ಗಳು ದೆಹಲಿ ಪ್ರವೇಶಿಸದಂತೆ ದೆಹಲಿ ಸರ್ಕಾರ ಶುಕ್ರವಾರ ಸೂಚಿಸಿತ್ತು.