ಶಿವಪುರಿ, ನ 07 (DaijiworldNews/HR): ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಯುವಕನನ್ನು ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ಆರೋಪಿಯ ಮನೆಯನ್ನು ನೆಲಸಮಗೊಳಿಸಲಾಗುವುದು ಮತ್ತು ಆತನ ಹೆಸರಿನಲ್ಲಿರುವ ಬಂದೂಕು ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಕೊಲೆಗೀಡಾಗಿರುವ ಧೀರು ಜಾಟವ್ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದು, ಮದುವೆಯ ಬಳಿಕ ದಂಪತಿಗಳು ಗುಜರಾತ್ನ ಅಹಮದಾಬಾದ್ಗೆ ಓಡಿಹೋಗಿ ಅಲ್ಲಿ ವಾಸಿಸುತ್ತಿದ್ದರು. ಸಂಬಂಧಿಕರ ಸಿಟ್ಟು ತಣ್ಣಗಾಗಬಹುದೆಂಬ ನಿರೀಕ್ಷೆಯಲ್ಲಿಇತ್ತೀಚೆಗಷ್ಟೇ ದಂಪತಿ ದೀಪಾವಳಿ ಆಚರಿಸಲು ತಮ್ಮ ಮಗಳೊಂದಿಗೆ ಊರಿಗೆ ಬಂದಿದ್ದರು.
ಇನ್ನು ಕೊಲೆಯಾದ ಧೀರು ಇತರ ಇಬ್ಬರೊಂದಿಗೆ ಅಂಗಡಿಯೊಂದಕ್ಕೆ ಹೋಗುತ್ತಿದ್ದಾಗ ಆತನ ಮಾವ ಸೇರಿದಂತೆ ಆರೋಪಿಗಳು ಆತನನ್ನು ಅಪಹರಿಸಿ ಕೊಡಲಿಯಿಂದ ಕೊಂದಿದ್ದಾರೆ ಎನ್ನಲಾಗಿದೆ.
ಆರೋಪಿಗಳು ತನ್ನ ಮಗನನ್ನು ದೊಣ್ಣೆ ಮತ್ತು ರೈಫಲ್ನಿಂದ ಹೊಡೆದು ನಂತರ ಕೊಡಲಿಯಿಂದ ಕೊಂದದ್ದನ್ನು ನೋಡಿದ್ದೇನೆ ಎಂದು ಹೇಳಿದ್ದು, ಪೊಲೀಸರು ಏಳು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ್ದಾರೆ.