ಪಣಜಿ, ನ 04 (DaijiworldNews/HR): ಕೆಲಸದ ಹೆಸರಿನಲ್ಲಿ ಗೋವಾದ ಕೆಲವು ಯುವಕರನ್ನು ಬೇರೆ ದೇಶಗಳಿಗೆ ಕರೆದೊಯ್ಯಲಾಗುತ್ತದೆ, ಆದರೆ ವಾಸ್ತವದಲ್ಲಿ ಅವರನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಏಜೆಂಟರ ಮೂಲಕ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಗಟ್ಟಲೆ ಹಣ ಕೊಟ್ಟಿರುವುದಾಗಿ ಕೆಲವರು ನನ್ನ ಬಳಿ ಬಂದಿದ್ದಾರೆ. ಪೊಲೀಸರು ಇಂತಹ ಪ್ರಕರಣಗಳಲ್ಲಿ ಸಕ್ರಿಯರಾಗಿರಬೇಕು ಮತ್ತು ಯಾರಾದರೂ ದೂರು ನೀಡುವವರೆಗೆ ಕಾಯಬೇಡಿ ಎಂದರು.
ಇನ್ನು ವೇಶ್ಯಾವಾಟಿಕೆಗಾಗಿಯೂ ಮಹಿಳೆಯರ ಕಳ್ಳಸಾಗಾಟ ನಡೆಯುತ್ತಿದ್ದು, ಇಂತಹ ಘಟಕನೆಯನ್ನು ನಾವು ಸಹಿಸುವುದಿಲ್ಲ. ಇಂತಹ ಪ್ರಕರಣವನ್ನು ಬೇಧಿಸಲು ಮತ್ತು ಇಂತಹ ಘಟನೆ ನಡೆಯದಂತೆ ತಡೆಯಲು ಸಂಬಂಧಿತ ಇಲಾಖೆಯನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.